ಮಸ್ಕತ್ ನಲ್ಲಿ ಪುತ್ತಿಗೆ ಶ್ರೀಗಳವರಿಗೆ ವೈಭವದ ಗುರುವಂದನೆ

ವಿಶ್ವ ಪರ್ಯಾಯ ಸಂಚಾರದಲ್ಲಿರುವ  ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರಿಗೆ ಗುರುವಂದನಾ ಕಾರ್ಯಕ್ರಮ ವೈಭವದಿಂದ ನೆರವೇರಿತು.  ಮಸ್ಕತ್ ನ ಶ್ರೀ ಕೃಷ್ಣಮಂದಿರದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಿರಣ್  ಅಶರ್, ಬನಿಯ ವ್ಯಾಪಾರ ಒಕ್ಕೂಟದ ಅಧ್ಯಕ್ಷರು, ಚೇರ್ಮ್ಯಾನ್  ಅಲ್ -ಅನ್ಸಾರಿ ಗ್ರೂಪ್ , ದಿವಾಕರ್ ಶೆಟ್ಟಿ , ಅಧ್ಯಕ್ಷರು, ಮಲ್ಟಿ ಟೆಕ್  ಕಾಂತ್ರ್ಕಟಿಂಗ್ ಕಂಪನಿ , ಹಾಗೂ ರಾಮ್ಕಿ ಮುಖ್ಯಸ್ಥರು, NBO ಬ್ಯಾಂಕ್ , Oman ಉಪಸ್ಥಿತರಿದ್ದು ಗೌರವವನ್ನು ಸಲ್ಲಿಸಿದರು.ಪೂಜ್ಯ ಶ್ರೀಪಾದರು  ಭಾರತೀಯ  ಸಂಸ್ಕೃತಿಯ ಮಹತ್ವವನ್ನು ತಿಳಿಸಿ ಎಲ್ಲ ಅನಿವಾಸಿ ಭಾರತೀಯರು ತಮ್ಮ ಮಕ್ಕಳನ್ನೂ ಈ ಬಗ್ಗೆ ತೊಡಗಿಸ ಬೇಕೆಂದು ಕರೆಯಿತ್ತರು.  ಮಸ್ಕತ್ ಜನರ ಪ್ರೀತಿ -ಭಕ್ತಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಎಲ್ಲ ಕೃಷ್ಣ ಭಕ್ತರನ್ನು ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು. ಉಡುಪಿಯ ಕಲ್ಮನ್ಜೆ ಲಕ್ಷ್ಮೀನಾರಾಯಣಾಚಾರ್ಯ ಸ್ವಾಗತಿಸಿದರು. ಕಾಪು ಶಶಿಧರ ಶೆಟ್ಟಿಯವರು ಧನ್ಯವಾದವಿತ್ತರು. ಶ್ರೀಮತಿ ಕವಿತಾ ರಾಮಕೃಷ್ಣರವರು  ಕಾರ್ಯಕ್ರಮವನ್ನು ನಿರೂಪಿಸಿದರು

 
 
 
 
 
 
 
 
 
 
 

Leave a Reply