ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಮುದ್ಲುಕೃಷ್ಣ ಸ್ಪರ್ಧೆ

ಪದ್ಮಶಾಲಿ ಯುವ ವೇದಿಕೆ , ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕರಿಗಾಗಿ ಮುದ್ಲುಕೃಷ್ಣ ಸ್ಪರ್ಧೆ ದಿನಾಂಕ : 14-08-2022, ಆದಿತ್ಯವಾರ, ಅಪರಾಹ್ನ ಗಂಟೆ 2-3೦ಕ್ಕೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.  

 ಸ್ಪರ್ಧಾ ವಿಭಾಗಗಳು: 2 ವರ್ಷಗಳ ವರೆಗೆ, 2 ವರ್ಷಕ್ಕೆ ಮೇಲ್ಪಟ್ಟು 4 ವರ್ಷಗಳ ವರೆಗೆ, 4 ವರ್ಷಕ್ಕೆ ಮೇಲ್ಪಟ್ಟು 6 ವರ್ಷಗಳ ವರೆಗೆ ನಡೆಯಲಿದೆ.   

ಸ್ಪರ್ಧಾ ನಿಯಮಗಳು: ಸ್ಪರ್ಧಾಳುಗಳು ಸ್ಪರ್ಧೆ ಪ್ರಾರಂಭವಾಗುವ ಕನಿಷ್ಠ ಅರ್ಧ ಗಂಟಿ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು.2 ವರ್ಷಗಳವರೆಗಿನ ವಿಭಾಗದಲ್ಲಿ ಯಶೋಧೆಯಾಗಿ ತಾಯಂದಿರು ಭಾಗವಹಿಸಬಹುದು. ಆದರೆ ಕಡ್ಡಾಯವಲ್ಲ.  ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು ಹಾಗೂ ಭಾಗವಹಿಸುವ ಪ್ರತಿಯೊಬ್ಬ ಸ್ಟರ್ಧಾಳುವಿಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರತೀ ವಿಭಾಗದ ಸ್ಪರ್ಧಾಳುಗಳಿಗೆ ಗರಿಷ್ಠ 2 ನಿಮಿಷಗಳ ಕಾಲಾವಕಾಶ ಇರುವುದು.  ವೇಷಭೂಷಣ ಮತ್ತು ಅಭಿನಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುವುದು. ಸ್ಪರ್ಧಾಳುಗಳು ಮುದ್ರಿತ ಧ್ವನಿಸುರುಳಿಗಳನ್ನು ಉಪಯೋಗಿಸ ಬಹುದು. ಆದರೆ ಕಡ್ಡಾಯವಲ್ಲ. 
ಹೆಚ್ಚಿನ ಮಾಹಿತಿಗಾಗಿ ಅಜತ್‌ ಶೆಟ್ಟಗಾರ್‌ ಕಪ್ಪೆಟ್ಟು, 98453 09836, ದೇವಳದ ಕಚೇರಿ -0820-2581809 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply