ರಜೆ ಇದ್ದರೂ ಅಂಚೆ ಕಛೇರಿಗಳಲ್ಲಿ ದ್ವಜ ವಿತರಣೆ 

ನಾಳೆ ಆಗಸ್ಟ್ 9ರಂದು ಅಂಚೆ ಕಛೇರಿಗಳಿಗೆ ರಜೆ ಇದ್ದರೂ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ರಾಷ್ಟ್ರೀಯ ಧ್ವಜವನ್ನು ಖರೀದಿಸಲು ಅನುಕೂಲವಾಗುವಂತೆ ಉಡುಪಿ ವಿಭಾಗದ ಎಲ್ಲಾ ಇಲಾಖಾ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುವುದು ಹಾಗೂ ತಾರೀಕು 14ನೇ ರವಿವಾರದಂದು ಕೂಡ ಕಾರ್ಯ ನಿರ್ವಹಿಸುವುದು. ಆದರೆ ಆ ಎರಡೂ ದಿನಗಳಲ್ಲಿ ತಿರಂಗಾ ವಿತರಣೆ ಮಾತ್ರ ಇದ್ದು ಬೇರೆ ಯಾವುದೇ ವ್ಯವಹಾರಗಳು ಇರುವುದಿಲ್ಲ.

ಸಾರ್ವಜನಿಕರು ಇದರ ಪ್ರಯೋಜನ ಪಡೆಯ ಬೇಕೆಂದು ಉಡುಪಿ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.

 

 
 
 
 
 
 
 
 
 
 
 

Leave a Reply