ಬೃಹತ್ ಪಾದಯಾತ್ರೆ

ಅಲೆವೂರು ಮಹಿಳಾ ಸಂಘ ಶ್ರೀರಾಮಪುರ ಇದರ ನೇತೃತ್ವದಲ್ಲಿ,  ಅಲೆವೂರು ಯುವಕ ಸಂಘ ಶ್ರೀರಾಮಪುರ ಇದರ ಸಹಭಾಗಿತ್ವದಲ್ಲಿ ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀರಮಣ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಅಲೆವೂರು ಗ್ರಾಮದ ಹಲವಾರು ಸಂಘ ಸಂಸ್ಥೆಗಳ ಒಡಗೂಡಿ ದಿನಾಂಕ 19-2-203 ಭಾನುವಾರ ಬೆಳಿಗ್ಗೆ 6.00ಗಂಟೆಗೆ ಅಲೆವೂರು ಅಮ್ಮನ ಕಡೆಯಿಂದ ಕನ್ನರ್ಪಾಡಿ ಅಮ್ಮನಡೆಗೆ ಲೋಕ ಕಲ್ಯಾಣಾರ್ಥವಾಗಿ ಸತತ ಆರನೇ ವರ್ಷದ ಬೃಹತ್ ಪಾದಯಾತ್ರೆಯು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಡಲಿರುವುದು. 
ಈ ಪುಣ್ಯಪಾದ ಯಾತ್ರೆಯಲ್ಲಿ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
 
 
 
 
 
 
 
 
 
 
 

Leave a Reply