ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆಯಲ್ಲಿ ತನು ತರ್ಪಣ ನಾಗಮಂಡಲ ಸೇವೆ

ಉಡುಪಿ : ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆಯಲ್ಲಿ ನಡೆದ ತನು ತರ್ಪಣ ನಾಗಮಂಡಲ ಸೇವೆ ಜರುಗಿತು. ಶ್ರೀ ರಮಾನಂದ ಗುರೂಜಿಯ ನೇತೃತ್ವದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ಪೌರೋಹಿತ್ಯದಲ್ಲಿ ಹೆಜಮಾಡಿ ಹರಿಭಟ್ ತನುತರ್ಪಣ ಸೇವೆಯನ್ನು ನಡೆಸಿಕೊಟ್ಟರು.

ನಾಗ ಸಂದರ್ಶನವನ್ನು ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ನಡೆಸಿಕೊಟ್ಟರು. ಕಾರ್ಯಕ್ರಮದ ಸೇವಾದಾರ ಅಜಯ್ ಹೃದಯ ನಾರಾಯಣ ಉಪಾಧ್ಯಾಯ ಮತ್ತು ಕುಟುಂಬಸ್ಥರು, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ, ಪ್ರಜ್ಞಾ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಉಷಾ ರಮಾನಂದ್, ಸ್ವಸ್ತಿಕ್ ಆಚಾರ್ಯ, ಪ್ರಾಧ್ಯಾಪಕಿ ಸ್ವಾತಿ ಆಚಾರ್ಯ, ನಾಗರಾಜ ಆಚಾರ್ಯ, ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯಿರಿ, ಛಾಯ ಚಿತ್ರಗ್ರಾಹಕ ಚರಣ್ ರಾಜ್, ಶಿಲ್ಪಿ ಜಗದೀಶ್ ಆಚಾರ್ಯ, ಅಂಬಲಪಾಡಿ ಗಣೇಶ,ಕಲಾವತಿ ಆಚಾರ್ಯ ನಾಗಸ್ವರ ವಾದನದಲ್ಲಿ ಮುರಲಿ ಧರಾ, ಮುದ್ರಾಡಿ ಮೃಣಾಲ್ ಕೃಷ್ಣ, ಅರ್ಚಕ ಗಜಾನನ ಭಟ್,ಹಾಗೂ ಕ್ಷೇತ್ರದ ಅನೇಕ ಭಕ್ತರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply