ಕೋಟ- ಯಕ್ಷಸೌರಭ ಪ್ರಶಸ್ತಿಗೆ ಯಕ್ಷಗುರು ದೇವದಾಸ ರಾವ್ ಕೂಡ್ಲಿ ಆಯ್ಕೆ

 ಕೋಟ: ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ಚರ ಕಲಾರಂಗ ಕೋಟ ಇದರ ರಂಗಾರ್ಪಣಾ ೨೦೨೨ ಶೀರ್ಷಿಕೆಯಡಿ ಯಕ್ಷಸೌರಭ ಪ್ರಶಸ್ತಿಯನ್ನು ಯಕ್ಷಗುರು ದೇವದಾಸ ರಾವ್ ಕೂಡ್ಲಿ ಆಯ್ಕೆಯಾಗಿದ್ದು ಇದೇ ಬರುವ ಎ.೨೯ರ ಸಂಜೆ.೬ಗ.ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ಚರ ದೇವಸ್ಥಾನ ಸಮೀಪ ನಡೆಯಲಿರುವ ೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಗೈಯಲಿದ್ದು.ಅದೇ ಸಂದರ್ಭದಲ್ಲಿ ಹಿರಿಯ ಯಕ್ಷಸಾಧಕರಾದ ಶೀನ ಭಂಢಾರಿ ಗಿಳಿಯಾರು, ಎಸ್ ರುದ್ರಯ್ಯ ಆಚಾರ್ಯ ಸಾಯ್ಬಿçಕಟ್ಟೆ,ಕೆ.ಬಿ ಐತ ನೆಲ್ಲಿಬೆಟ್ಟು ಇವರುಗಳನ್ನು ಸನ್ಮಾನಿಸಲಿದೆ.ಆ ಪ್ರಯುಕ್ತ ಯಕ್ಷಗುರು ಪ್ತಸಾದ್ ಕುಮಾರ್ ಮಾರ್ಗದರ್ಶನದಲ್ಲಿ ಯಕ್ಷಸೌರಭ ಕಲಾವಿದರಿಂದ ವಂಶವಾಹಿನಿ ಪೌರಾಣಿಕ ಯಕ್ಷಗಾನ,ತದನಂತರ ಹವ್ಯಾಸಿ ಯುವ ಮಹಿಳಾ ಕಲಾವಿದರಿಂದ ಮಾಯಾಪುರಿ ಹಾಗೂ ಹವ್ಯಾಸಿ ಪುರುಷ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ಜೋಡಾಟ ಪ್ರದರ್ಶನಗೊಳ್ಳಲಿದೆ ಎಂದು ಸಂಘಟನೆ ಅಧ್ಯಕ್ಷ ಪ್ರಶಂತ್ ಪೂಜಾರಿ ಪಡುಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply