ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮ

06/01/24 ರ ಶನಿವಾರದಂದು ಧನುರ್ಮಾಸಾಚಾರಣೆಯ ಸಂದರ್ಭದಲ್ಲಿ ಶ್ರೀ ಗುರು ನರಸಿಂಹ ದೇವಸ್ಥಾನ, ಸಾಲಿಗ್ರಾಮದ ಸಾಂಸ್ಕೃತಿಕ ವೇದಿಕೆಯಲ್ಲಿ ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮವು ನಡೆಯಿತು. ಭಾಗವತರಾಗಿ ರಾಘವೇಂದ್ರ ಮೈಯ್ಯ, ಪ್ರಸನ್ನ ಭಟ್ ಮತ್ತು ರಕ್ಷಾ ಹೆಗಡೆ , ಹಿಮ್ಮೇಳ ದಲ್ಲಿ ಶ್ರೀ ರಾಘವೇಂದ್ರ ಬಾಳಕಲ್(ಮದ್ದಳೆ), ಶಿವಾನಂದ ಕೋಟ(ಚಂಡೆ) ಭಾಗವಹಿಸಿದ್ದರು. ಕೂಟ ಮಹಾಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆಯವರ ಪ್ರಾಯೋಜಕತ್ವದ ಕಾರ್ಯಕ್ರಮದ ಕೊನೆಯಲ್ಲಿ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕಲಾವಿದರಿಗೆ ಶ್ರೀ ದೇವರ ಪ್ರಸಾದದೊಂದಿಗೆ ಶುಭವನ್ನು ಹಾರೈಸಿದರು. ದೇವಳದ ಪ್ರಬಂಧಕ ಶ್ರೀ ನಾಗರಾಜ ಹಂದೆಯವರು ಸ್ವಾಗತಿಸಿದರು. ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯದರ್ಶಿ ಮಹಾಬಲ ಹೇರ್ಳೆ, ಪೂರ್ವಾಧ್ಯಕ್ಷ ಗೆಳೆಯರ ಬಳಗದ ಶ್ರೀ ಕೆ. ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ಶ್ರೀ ಚಿದಾನಂದ ತುಂಗ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು.

 
 
 
 
 
 
 
 
 
 
 

Leave a Reply