ಶ್ರೀ ವಿದ್ಯಾರತ್ನ ತೀರ್ಥರ ಆರಾಧನೋತ್ಸವ

ಗುರುವಾರದಂದು ಜಗದ್ಗುರು ಮಧ್ವಾಚಾರ್ಯ ರಿಂದ ಸಂಸ್ಥಾಪಿಸಲ್ಪಟ್ಟ ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ಜನಾರ್ದನ ತೀರ್ಥ ಯತಿಪರಂಪರೆಯ 33 ನೇ ಯತಿಗಳಾಗಿದ್ದ ( ಈಗಿನ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಗುರುಗಳು) ಶ್ರೀ ವಿದ್ಯಾರತ್ನ ತೀರ್ಥ ಶ್ರೀಪಾದರ 51 ನೇ ಪುಣ್ಯತಿಥಿ ಆ ನಿಮಿತ್ತ ಉಡುಪಿ ಮಣಿಪಾಲ ಸಮೀಪದ ಸಗ್ರಿಯಲ್ಲಿರುವ ಶ್ರೀ ಮಠದ ಶಾಖಾಮಠವಾಗಿರುವ ರಾಮಕಟ್ಟೆ ಮಠದಲ್ಲಿರುವ ಶ್ರೀಗಳ ವೃಂದಾವನ ಸನ್ನಿಧಿಯಲ್ಲಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸದಸ್ಯರಿಂದ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಪೂಜೆ ಸಹಿತ ಗುರುಸಂಸ್ಮರಣೆ ನಡೆಯಿತು .

ಶ್ರೀಗಳವರ ಸುದೀರ್ಘ ಒಡನಾಡಿಗಳಾಗಿದ್ದ ಇಂಜಿನಿಯರ್ ಯು ಕೆ ರಾಘವೇಂದ್ರ ರಾವ್ , ನಿವೃತ್ತ ಪ್ರಾಚಾರ್ಯ ಪ್ರೊ ಶ್ರೀಶ ಆಚಾರ್ಯರು ಗುರುಗಳನ್ನು ಸ್ಮರಸಿ ಮಾತಾಡಿದರು .‌

ವಿಷ್ಣುಪ್ರಸಾದ್ ಪಾಡಿಗಾರ್ , ರಮೇಶ ಬಾರಿತ್ತಾಯ ರಂಗನಾಥ ಸಾಮಗ ,ಬಾಲಕೃಷ್ಣ ಭಟ್ ಹಂಸರಾಜ್ ಕಾರಂತ್ ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಸಂಯೋಜನೆಯಲ್ಲಿ ನೆರವಾದರು .

 
 
 
 
 
 
 
 
 
 
 

Leave a Reply