ಉಡುಪಿ : ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗು ನಗರ ಕೇಂದ್ರ ಗ್ರಂಥಾಲಯಾ ಉಡುಪಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2021 ಇದರ ಸಮಾರೋಪ ಸಮಾರಂಭ ಕೆ.ಎಮ್ ಮಾರ್ಗ ಉಡುಪಿ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ನೆಡೆಯಿತು
ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲೆ, ಸಾಹತಿ ಡಾ. ಮಾಧವಿ ಭಂಡಾರಿ ದೀಪ ಬೆಳಗಿಸಿ ಚಾಲನೆ ನೀಡಿ ಎಲ್ಲರೂ ಪುಸ್ತಕವನ್ನು ಪ್ರೀತಿಸವ ಅಭ್ಯಾಸ ಬೆಳಸಿಕೊಳ್ಳಿ ಆಗ ನಮ್ಮೊಂದೊಂದಿಗೆ ಪುಸ್ತಕ ಬದುಕುತ್ತದೆ ನಮ್ಮ ಜ್ಯಾನ ವೃದ್ಧಿಗೆ ಪುಸ್ತಕ ಪೂರಕವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉಡುಪಿ ಪಿಪಿಸಿ ಕಾಲೇಜಿನ ಉಪನ್ಯಾಸಕ ಡಾ. ಮಂಜುನಾಥ ಕರಬ ಉಪನ್ಯಾಸದಲ್ಲಿ ಮಕ್ಕಳು ಹೆತ್ತವರು ವಿದ್ಯಾರ್ಥಿಗಳು ಮೊಬೈಲ್ ಪ್ರೀತಿ ಬಿಟ್ಟು ಪುಸ್ತಕ ಪ್ರೀತಿ ಬೆಳಸಿಕೊಳಲುವಂತೆ ಕರೆ ನೀಡಿದರು.
ಅಜ್ಜರಕಾಡು ಜಿ.ಶಂಕರ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಉಡುಪಿ ನಗರ ಕೇಂದ್ರ ಗ್ರಂಥಾಲಯಾ ಮುಖ್ಯಾಧಿಕಾರಿ ಜಯಶ್ರೀ ಸ್ವಾಗತಿಸಿ,ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಓದುಗರು ಗ್ರಂಥಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.