ವಿಶ್ವ ಕನ್ನಡ ಹಬ್ಬಕ್ಕೆ ಮಾನ್ಯ ಸಚಿವರಾದ ಶ್ರೀ. ವಿ. ಸುನೀಲ್ ಕುಮಾರ್ ರವರ ಬೆಂಬಲ

ಮಾನ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ. ವಿ. ಸುನೀಲ್ ಕುಮಾರ್ ರವರನ್ನು ಬೇಟಿ ಮಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಟಿ.ಶಿವಕುಮಾರ್ ನಾಗರ ನವಿಲೆ ಮತ್ತು ಪದಾಧಿಕಾರಿಗಳು ದಿನಾಂಕ 19/11/2022 ರಂದು ದುಬೈ ಶೇಕ್ ರಶೀದ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ವಿಶ್ವ ಕನ್ನಡ ಹಬ್ಬ’ಕ್ಕೆ ಆಗಮಿಸಿ, ಕನ್ನಡದ ಕೈಂ ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ರೂಪುರೇಷೆಗಳನ್ನು ಸಂಪೂರ್ಣವಾಗಿ ವಿವರಿಸಿದ ವಿಶ್ವ ಕನ್ನಡ ಹಬ್ಬದ ರೂವಾರಿ ಪ್ರಸಾದ್ ಶೆಟ್ಟಿಯವರು, ತಮ್ಮ ಸಂಪೂರ್ಣ ಸಹಕಾರ ಈ ಕಾರ್ಯಕ್ರಮಕ್ಕೆ ಅಗತ್ಯವಿದ್ದು, ಇದರ ಯಶಸ್ವಿಗೆ ಕೈ ಜೋಡಿಸಬೇಕೆಂದು ವಿನಂತಿಸಿದರು.ಈ ಸಂದರ್ಭದಲ್ಲಿ ಸಚಿವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್.ಅರುಣ್, ಸಂಪಾದಕರಾದ ಅನಿಲ್ ಕುಮಾರ್, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ರವಿ ಸಂತೋಷ, ಮಂಜುಳಾಪಾವಗಡ, ಭರತ್ ಜಾಕ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply