ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಭಾನುವಾರ ಸಂಜೆ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅಪ್ಪು ಅವರು ನಟನೆ ಮಾಡು ವುದಷ್ಟೇ ಅಲ್ಲ, ಯುವಕರಿಗೆ ಸ್ಫೂರ್ತಿಯಾಗಿ ಮಾರ್ಗದರ್ಶನ ಮಾಡುವುದರೊಂದಿಗೆ ಸಮಾಜ ಸೇವೆಯಲ್ಲೂ ಸೈ ಎನಿಸಿ ಕೊಂಡ ವ್ಯಕ್ತಿತ್ವ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಅಭಿಮಾನಿ ಬಳಗದ ಕೃಷ್ಣ ಶೆಟ್ಟಿ ಬೆಟ್ಟು, ಉಪಾಧ್ಯಕ್ಷರಾದ ಲಕ್ಷ್ಮಣ ಕೊಲ್ಕಾರ್, ಈರಪ್ಪ ಗೌಂಡಿ, ಪಂಪೇಶ್, ಚೋಳಮಂಡಲಮ್ ಫೈನಾನ್ಸ್ ನ ಮ್ಯಾನೇಜರ್ ಮಿಥುನ್ ಹಾಗೂ ಅಭಿಮಾನಿ ಬಳಗದವರು ರಕ್ಷಣಾ ವೇದಿಕೆಯವರು ಚೋಳ ಮಂಡಲಮ್ ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು