ಸಗ್ರಿ ಶ್ರೀ ವಾಸುಕಿ ಕ್ಷೇತ್ರಕ್ಕೆ ನಳಿನ್ ಕಟೀಲ್ ಭೇಟಿ

ಮಂಗಳೂರು ಸಂಸದ , ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟಿಒಲ್ ಅವರು ಮಂಗಳವಾರ ಉಡುಪಿಯ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು .‌

ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ನಾಗದೇವರ ಶಿಲಾಮಯ ಗುಡಿಯ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು .‌ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಗುಡಿ ಸಮರ್ಪಣೆ , ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಾಗಮಂಡಲದ ಕುರಿತು ನಾಗಪಾತ್ರಿಗಳೂ ಕ್ಷೇತ್ರದ ಆಡಳಿತ ಮೊಕ್ತೇಸರರೂ ಆಗಿರುವ ಸಗ್ರಿ ಗೋಪಾಲಕೃಷ್ಣ ಸಾಮಗರು ವಿವರಿಸಿದರು .

ಬಿಜೆಪಿ ಮುಖಂಡರಾದ ಕೆ ಉದಯ್ ಕುಮಾರ್ ಶೆಟ್ಟಿ , ಜಗದೀಶ ಅಧಿಕಾರಿ , ನಗರಸಭಾಧ್ಯಕ್ಷೆ ರು ಮಿತ ಗ್ ನಾಯಕ್ , ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಟ್ಟೂರು , ಮಹೇಶ್ ಠಾಕೂರ್ , ಮಂಜುನಾಥ ಶೆಟ್ಟಿಗಾರ್ , ಅನಂತ ಸಾಮಗ , ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರಿದ್ದರು.‌

 
 
 
 
 
 
 
 
 
 
 

Leave a Reply