ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಜನ್ಮದಿನ- ಹಣ್ಣುಹಂಪಲು ಮತ್ತು ಬೆಡ್ ಶೀಟ್ ವಿತರಣೆ

ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಜನ್ಮದಿನವಾದ ಇಂದು ದಿನಾಂಕ 24-02-2022 ರಂದು ಮಲ್ಪೆ ಮೀನುಗಾರರ ಸಂಘ ಮತ್ತು ಸಮಸ್ತ ಮೀನುಗಾರರ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹಣ್ಣುಹಂಪಲು ಮತ್ತು ಬೆಡ್ ಶೀಟ್ ವಿತರಿಸಲಾಯಿತು.

ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಪಾಲ್ಗೊಂಡು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು, ಬೆಡ್ ಶೀಟ್ ವಿತರಿಸಿ ಕ್ಷೇಮಾರೋಗ್ಯ ವಿಚಾರಿಸಿದರು.

ಮಲ್ಪೆ ಮೀನುಗಾರರ ಸಂಘದವರಿಗೆ ಮತ್ತು ಸಮಸ್ತ ಮೀನುಗಾರರಿಗೆ ಶಾಸಕ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಮತ್ತು ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ನಾಗರಾಜ್ ಸುವರ್ಣ, ರತ್ನಾಕರ್ ಸಾಲ್ಯಾನ್, ಸುಭಾಷ್ ಮೆಂಡನ್, ಸತೀಶ್ ಕುಂದರ್, ರಮೇಶ್ ಕೋಟ್ಯಾನ್, ಮಹೇಶ್ ಸುವರ್ಣ, ದಯಾನಂದ್ ಕುಂದರ್, ನಾರಾಯಣ ಕರ್ಕೇರ, ಸಂತೋಷ್ ಸಾಲ್ಯಾನ್, ಪ್ರಭಾಕರ್ ಸುವರ್ಣ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply