ಉಡುಪಿ ಜನತಾ ಹೋಟೆಲ್ ಮಾಲಕ, ಬನ್ನಂಜೆ ಸರಸ್ವತಿ ಶಾಲೆ ಹಳೆ ವಿದ್ಯಾರ್ಥಿ ಸಂಘಕ್ಕೆ ಕೊಡುಗೈ ದಾನಿಯಾದ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷತೆಯಿಂದ, ಪ್ರಾಮಾಣಿಕ ಸೇವೆ ಸಲ್ಲಿಸಿದ ವಾಸುದೇವ್ ಕಾಮತ್ ಗುಂಡಿಬೈಲು, ಇಂದು ಮುಂಜಾನೆ ದೈವಾಧೀನರಾದರು.
ಕಾಂಗ್ರೆಸ್ ಮುಖಂಡರಾದ ಜಯ ಶೆಟ್ಟಿ ಬನ್ನಂಜೆ, ಗಣೇಶ ರಾಜ್ ಸರಳೇಬೆಟ್ಟು. ಸುರೇಶ್ ಶೆಟ್ಟಿ ಬನ್ನಂಜೆ. ಸುಧೀರ್ ಶೆಟ್ಟಿ ಬನ್ನಂಜೆ, ದಿವಾಕರ್ ಶೆಟ್ಟಿ ಬನ್ನಂಜೆ. ಸುಧಾಕರ ಶೆಟ್ಟಿ ಬನ್ನಂಜೆ, ರಾಘವೇಂದ್ರ ಪೈ ಸಿಟಿ ಮೊದಲಾದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.