ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ಪತಿ ರಾಮಕೃಷ್ಣ ತೀವ್ರ ವಿಚಾರಣೆ…?

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ನಲ್ಲಿ ಕೆಲವು ದಿ‌ನಗಳ ಹಿಂದೆ ನಡೆದ ವಿಶಾಲಾ ಗಾಣಿಗ ಕೊಲೆ ಪ್ರಕರಣದ ಆರೋಪಿಗಳು ಇಲ್ಲಿ ತನಕ ಪತ್ತೆಯಾಗಲಿಲ್ಲ.

 ಆದರೆ ಈಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ ಅವರ ಪತಿ ರಾಮಕೃಷ್ಣ ಅವರನ್ನು ಸಂಶಯದ ಮೇರೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.​ ಆದರೆ ಪತಿಯ ಮೇಲೆ ಸಂಶಯಗೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.​ ​ಸುಪಾರಿ ನೀಡಿ ವಿಶಾಲ ಅವರನ್ನು ಕೊಲೆಗೈದಿರುವ ಸಂಶಯ ವ್ಯಕ್ತವಾಗಿದೆ.​ ​
ಇಬ್ಬರು ಸುಪಾರಿ ಕಿಲ್ಲರ್ ಗಳು ಹೊರಗಿನಿಂದ ಬಂದು ಕೊಲೆಗೈದು ​ಬಳಿಕ  ಮೈಮೇಲಿದ್ದ ಚಿನ್ನ ತೆಗೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.​ ​ಅಂತೆಕಂತೆಗೆಲ್ಲ ಪೊಲೀಸರು ಶೀಘ್ರ ಇತಿಶ್ರೀ ಹಾಡಬೇಕಿದೆ. ​
 
 
 
 
 
 
 
 
 
 
 

Leave a Reply