ಎ ಮುರಾರಿ ರಾವ್ ನಿಧನ

ಕೆನರಾ ಬ್ಯಾಂಕಿನಲ್ಲಿ ಸೀನಿಯರ್ ಮೆನೇಜರ್ ಆಗಿ ನಿವೃತ್ತರಾದ ಎ.ಮುರಾರಿ ರಾವ್(85) ಇಂದು(17-3-2024)ಅಲ್ಪಕಾಲದ ಅಸೌಖ್ಯದಿಂದ ಮುಂಬೈಯಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನರಾದರು. ದೈವಭಕ್ತರು,ಕಲಾಪ್ರೇಮಿಯೂ ಆದ ಇವರು, ಬಡ ಮಕ್ಕಳ ಶಿಕ್ಷಣಕ್ಕೆ ನಿರಂತರ ಆರ್ಥಿಕ ನೆರವು ನೀಡುತ್ತಿದ್ಧರು. ಕಳೆದ ವಾರ ಅವರ ಅಪೇಕ್ಷೆಯಂತೆ ಓರ್ವ ವಿದ್ಯಪೋಷಕ್ ವಿದ್ಯಾರ್ಥಿನಿಗೆ ಲ್ಯಾಪ್ ಟಾಪ್ ನೀಡಲಾಗಿತ್ತು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿ ಕಳೆದ ಮೂರು ದಶಕಗಳಿಂದ ಪತ್ನಿ ಚಂದ್ರಕಲಾ ರಾವ್ ರೊಂದಿಗೆ (ಇವರೂ ಸಂಸ್ಥೆಯ ಆಜೀವ ಸದಸ್ಯರು) ಉಡುಪಿಯಲ್ಲಿ ನಡಲೆಸಿದ್ದರು. ಪತ್ನಿ, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply