ಮುನಿಯಾಲು ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಮಣಿಪಾಲ: ಮುನಿಯಾಲು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯಿತು. ಅಭ್ಯಾಗತರಾಗಿದ್ದ ಮಣಿಪಾಲ ಕೆಎಂಸಿ ಯೋಗ ವಿಭಾಗ ನಿವೃತ್ತ ಮುಖ್ಯಸ್ಥ ಡಾ. ಗಣಪತಿ ಜೋಯಿಸ ಉದ್ಘಾಟಿಸಿ, ಯೋಗದ ಮಹತ್ವ ವಿವರಿಸಿದರು.

ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಮುನಿಯಾಲು ಯೋಗ ಮತ್ತು ನ್ಯಾಚುರೋ ಪತಿ ಕಾಲೇಜಿನ ಪ್ರಾಂಶುಪಾಲೆ ಡಾ. ಅಪರ್ಣ ಸುರೇಂದ್ರ, ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ. ಚಂದ್ರಕಾಂತ ಭಟ್, ಸ್ನಾತಕ ಪೂರ್ವ ವಿಭಾಗ ಮುಖ್ಯಸ್ಥೆ ಡಾ. ಶುಭ ಎಂ. ಇದ್ದರು.

ಸಂಸ್ಥೆಯ ಯೋಗ ಶಿಕ್ಷಕಿ ಜ್ಯೋತ್ಸ್ನಾ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಆಶಿತಾ ನಿರೂಪಿಸಿದರು.

 
 
 
 
 
 
 
 
 
 
 

Leave a Reply