ಇತ್ತೀಚಿನ ದಿನಗಳಲ್ಲಿ ಶಿವಳ್ಳಿ ಮಾಧ್ವ ಸಂಪ್ರದಾಯದ ಬಗ್ಗೆ ಕೆಲವು ಕ್ಷೇತ್ರ ಮಠ ಮಂದಿರಗಳಲ್ಲಿ ಅನಿರೀಕ್ಷಿತ ಕೆಲವು ಧಾರ್ಮಿಕ ಆಂತರಿಕ ವಿಚಾರಗಳಲ್ಲಿ ಪ್ರಕ್ಷುಬ್ದ ವಾತಾವರಣವನ್ನು ಕೆಲವರು ಹಿತಶತ್ರುಗಳು ಉಂಟುಮಾಡುತ್ತಿದ್ದಾರೆ.
ನೂರಾರು ವರ್ಷಗಳಿಂದ ಶಾಸ್ತ್ರೀಯ ಪ್ರಮಾಣದ ಅನುಸಾರ ಐತಿಹಾಸಿಕ ಘಟನೆಯ ನಿರ್ಣಯದ ಸಂಪ್ರದಾಯದೊಂದಿಗೆ ನಡೆಸುಕೊಂಡು ಬರುತ್ತಿರುವ ಈ ಕಾಲದಲ್ಲಿ ಉದಾಹರಣೆಗೆ ಸುಬ್ರಹ್ಮಣ್ಯವೇ ಮೊದಲಾದ ಶಿವಳ್ಳಿ ಮಾಧ್ವ ಬ್ರಾಹ್ಮಣರು ಮಾಡುವ ಪೂಜಾ ಸ್ಥಳಗಳಲ್ಲಿ ಅನೂಚಾನವಾಗಿ ನಡೆಸಿ ಕೊಂಡು ಬರುತ್ತಿರುವ ಧಾರ್ಮಿಕ ವಿಧಿವಿಧಾನಕ್ಕೆ ಧಕ್ಕೆ ಬರುವಂತೆ ನಡೆಸುತ್ತಿದ್ದಾರೆ.
ನಮ್ಮ ಪರಂಪರೆಯ ಗುರು ಮಠಕ್ಕೆ ಸಂಬಂಧಪಟ್ಟ ಅವಹೇಳನಕಾರಿ ಫಲಕಗಳನ್ನು ತೆಗೆಯಲು ನ್ಯಾಯಾಲಯದ ಆದೇಶ ಇದ್ದರೂ ನಿರ್ಲಕ್ಷ್ಯವನ್ನು ಪ್ರದರ್ಶಿಸಿ ಮಠಕ್ಕೆ ಗುರುಗಳಿಗೆ ಮಾಧ್ವ ಪರಂಪರೆಯ ಅರ್ಚಕರಿಗೆ ನೋವನ್ನುಂಟು ಮಾಡುತ್ತಿದ್ದಾರೆ ಈ ಎಲ್ಲಾ ವಿಚಾರದ ಬಗ್ಗೆ ಉಡುಪಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘವು ತೀವ್ರ ವಿರೋಧವನ್ನು ವ್ಯಕ್ತ ಪಡಿಸುತ್ತಾ ಈ ವಿಚಾರಕ್ಕೆ ಸಂಬಂಧ ಪಟ್ಟು ಇದಕ್ಕೆ ಸಂಬಂದಿಸಿದ ಅಧಿಕಾರ ವರ್ಗದವರು ಕೂಡಲೇ ಎಚ್ಚೆತ್ತು ಮಾಧ್ವ ಸಂಪ್ರದಾಯವನ್ನು
ಉಳಿಸಿ ಮಠ ಮಂದಿರಗಳನ್ನು ರಕ್ಷಿಸಬೇಕೆಂದು ಕಳಕಳಿಯ ವಿನಂತಿ.