ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆ

ಶ್ರೀ ವೇಂಕಟರಮಣ ದೇವಸ್ಥಾನ, ಕರಂಬಳ್ಳಿ ಉಡುಪಿ 2.  ಅಧಿಕ ಮಾಸದ ಪ್ರಯುಕ್ತ, ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆ, ( ಶ್ರೀ ರಾಮ ಮಂತ್ರ ಜಪ ಸಹಿತ )ಈ ವರ್ಷ ಅಧಿಕಮಾಸ ಬಂದಿದೆ ಅದೂ ಶ್ರಾವಣ ಮಾಸವೇ ಬಂದಿರುವುದು ಭಕ್ತರ ಮೇಲೆ ಭಗವಂತನ ಕಾರುಣ್ಯವೆಂದೇ ಭಾವಿಸಬೇಕು .ಪವಿತ್ರ ಅಧಿಕ ಶ್ರಾವಣಮಾಸದಲ್ಲಿ ಶ್ರೀ ಹರಿಯ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ದೇವತಾ ಸತ್ಕರ್ಮಗಳಿಗೆ ಅತ್ಯಧಿಕ ಫಲವೆಂದು ಶಾಸ್ತ್ರಗಳು ಸಾರಿ ಸಾರಿ ಹೇಳಿವೆ .

ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ಕರಂಬಳ್ಳಿ ಶ್ರೀ ವೇಂಕಟರಮಣದೇವರ ಸನ್ನಿಧಿಯಲ್ಲಿ ಸಮಸ್ತ ಭಕ್ತರಿಗೆ ಸಕಲ ಸದಭೀಷ್ಟ ಸಿದ್ಧಿಪೂರ್ವಕ ಶ್ರೇಯಸ್ಸು , ಗ್ರಾಮ‌ರಾಷ್ಟ್ರದಲ್ಲಿ ಸುಭಿಕ್ಷೆ ಸಮೃದ್ಧಿ , ಗೋವಂಶಕ್ಕೆ ಸುರಕ್ಷೆ ಲೋಕಕ್ಷೇಮಕ್ಕಾಗಿ ಪ್ರಾರ್ಥಿಸಿ ಸಾಮೂಹಿಕ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆಯನ್ನು ನಡೆಸುವುದೆಂದು ಸಂಕಲ್ಪಿಸಲಾಗಿದೆ .

ಇದೇ ಬರುವ 18/7/2023 ಮಂಗಳವಾರದಿಂದ ಮೊದಲ್ಗೊಂಡು 15 /8/2023 ನೇ ಮಂಗಳವಾರದ ವರೆಗೆ ಅಧಿಕ ಶ್ರಾಮಣ ಮಾಸ ಪರ್ಯಂತ ಈ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆ ನಡೆಯಲಿದ್ದು ಊರ ಪರವೂರಿನ ಮಕ್ಕಳು ಹಿರಿಯರೆನ್ನದೆ ಎಲ್ಲ ವಯೋಮಾನದ ಎಲ್ಲ ಜಾತಿ ಸಮುದಾಯಗಳ ಸಮಸ್ತ ಭಕ್ತರೂ ಇದರಲ್ಲಿ ಪಾಲ್ಗೊಂಡು ಪ್ರತಿನಿತ್ಯ ಯಥಾ ಶಕ್ತಿ ಪ್ರದಕ್ಷಿಣ ನಮಸ್ಕಾರ ಸೇವೆಯನ್ನು ನಡೆಸಿ ಶ್ರೀ ವೇಂಕಟರಮಣದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸುತ್ತೇವೆ .

ಅದರ ಜೊತೆಗೆ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಮುಂಬರುವ 2024 ರ ಜನವರಿ ತಿಂಗಳಾಂತ್ಯಕ್ಕೆ ನೂತನ ಮಂದಿರದಲ್ಲಿ ಶ್ರೀಸೀತಾರಾಮ ದೇವರ ಪ್ರತಿಷ್ಠಾಪನೆಯೂ ನಡೆಯಲಿದೆ .ಆ ನಿಮಿತ್ತ ಜನವರಿ ತಿಂಗಳವರೆಗೆ ನಾಡಿನೆಲ್ಲೆಡೆ ರಾಮನ ಪ್ರೀತಿಗಾಗಿ ರಾಮಮಂತ್ರ ಜಪಯಜ್ಞಗಳು ನಡೆಯಬೇಕೆಂಬುದು ಮಂದಿರ ಟ್ರಸ್ಟಿನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಆಶಯವಾಗಿದೆ .

 

ಆ ಹಿನ್ನೆಲೆಯಲ್ಲಿ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆಯ ಸಂದರ್ಭದಲ್ಲೇ ಶ್ರೀ ರಾಮ ಜಯ ರಾಮ‌ ಜಯ ಜಯ ಜಯ ರಾಮ ಎಂಬ ದಿವ್ಯ ಮಂತ್ರವನ್ನು ಜಪಿಸಿಕೊಂಡು ರಾಮದೇವರ ಅನುಗ್ರಹವನ್ನೂ ಪಡೆಯಲು ಅವಕಾಶ ನೀಡಿದ್ದೇವೆ. ಮತ್ತೊಮ್ಮೆ , ಈ ಪವಿತ್ರ ಸತ್ಕಾರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾಗುವಂತೆ ವಿನಂತಿಸುತ್ತೇವೆ .

ಪಾಡಿಗಾರು ಶ್ರೀ ವಾಸುದೇವ ತಂತ್ರಿಗಳು , ಕೆ ರಘುಪತಿ ಭಟ್ ಹಾಗೂ ಆಡಳಿತ ಮಂಡಳಿ ಅರ್ಚಕ ವೃಂದ ಸಿಬಂದಿ.
ಮತ್ತು ಗ್ರಾಮದ ಹತ್ತು ಸಮಸ್ತರು

ವಿಸೂ : ಪ್ರತಿನಿತ್ಯ ಬೆಳಿಗ್ಗೆ ,7 ರಿಂದ ರಾತ್ರಿ 7.30 ರ ವರೆಗೆ ( ಮಧ್ಯಾಹ್ನ ವಿರಾಮದ ಸಮಯ ಬಿಟ್ಟು) ಯಾವುದೇ ಸಮಯದಲ್ಲಿ ಭಕ್ತರು ಆಗಮಿಸಿ ಪ್ರದಕ್ಷಿಣ ನಮಸ್ಕಾರ ಸೇವೆ ನಡೆಸಬಹುದು .
ಅಧಿಕ ಮಾಹಿತಿಗಾಗಿ ಸಂಪರ್ಕ: ರಮೇಶ ಬಾರಿತ್ತಾಯ 9886826109, ವಾಸುದೇವ ಭಟ್ 9845895136
ಲಕ್ಷ್ಮೀನಾರಾಯಣ ಆಚಾರ್ಯ, 9845242879

 
 
 
 
 
 
 
 
 
 
 

Leave a Reply