ಬೈಂದೂರು: ವೇದ ಪಾರಾಯರಾಣ ಮತ್ತು ಸೂಕ್ತ ಪಠಣ.

ಸೂರ್ಯ ಸಿದ್ಧಾಂತ ಫೌಂಡೇಶನ್, ಪಂಚಾಂಗ ಮಂದಿರ ಮೊಗೇರಿ, ಕೆರ್ಗಾಲು ಇವರ ಪ್ರಾಯೋಜನೆಯಲ್ಲಿ ಜುಲೈ 23 ರವಿವಾರ ಸಂಜೆ ಗಂಟೆ 3.15 ರಿಂದ ಪುರುಷೋತ್ತಮ ಮಾಸದ ವಿಷೇಶವಾಗಿ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ವೈದಿಕರಿಂದ ವೇದ ಪಾರಾಯಣ ಮತ್ತು ಸೂಕ್ತ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಧ್ಯಾತ್ಮಿಕ ಚಿಂತಕರೂ,ಉಪ್ಪುಂದ ಕುಂದ ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷರೂ ಸೂರ್ಯ ಸಿದ್ಧಾಂತ ಫೌಂಡೇಶನ್ ನಿರ್ದೇಶಕರೂ ಆಗಿರುವ ಶ್ರೀ ಯು.ಸಿ.ಹೊಳ್ಳರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ಮಾಡಲಿರುವರು.

ವೇದಮೂರ್ತಿ ವಾಸುದೇವ ಐತಾಳರು ಉಳ್ಳೂರು ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಜೋಶಿ ರಾಮಕೃಷ್ಣ ಕಾರಂತರು ಕಿರಿಮಂಜೇಶ್ವರ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಋತ್ವಿಕ ಸಮಾಗಮದಲ್ಲಿ ಜರಗುವ ಕಾರ್ಯಕ್ರಮಕ್ಕೆ ಊರ ಪರಊರ ಆಸ್ತಿಕ ಮಹನೀಯರು ಭಗವಹಿಸಬೇಕಾಗಿ ಕಾರ್ಯಕ್ರಮದ ಪ್ರಾಯೋಜಕರು,ಮೊಗೇರಿ ಪಂಚಾಂಗ ಕರ್ತರಾದ ಶ್ರೀಮತಿ ಅನುಪಮಾ ಮತ್ತು ಶ್ರೀ ಜನಾರ್ದನ ಅಡಿಗ ವಿನಂತಿಸಿ ಕೊಂಡಿರುತ್ತಾರೆ.

 
 
 
 
 
 
 
 
 
 
 

Leave a Reply