ಬಾಳೆಬೆಟ್ಟು ಫ್ರೆಂಡ್ಸ್ ವರ್ಷೋತ್ಸವ ಸಂಭ್ರಮ-ಜಿ. ರಾಮಚಂದ್ರ ಐತಾಳ್ ಗೆ ಹುಟ್ಟೂರ ಸನ್ಮಾನ

ಕೋಟ: ಯುವ ಸಮುದಾಯ ಸಮಾಜದ ಅವಿಭಾಜ್ಯ ಅಂಗ ಇಂಥಹ ಯುವ ಪಡೆಗಳು ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದು ಉಡುಪಿ ಆದರ್ಶ ಆಸ್ಪತ್ರೆ ಇದರ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ ಹೇಳಿದ್ದಾರೆ.

ಕೋಟದ ಮಣೂರು ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೋಟ ಇದರ ಆಶ್ರಯದಲ್ಲಿ ವರ್ಷೋತ್ಸವ `ಸ್ಪರ್ಶ’ ೨೦೨೨ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಸಂಘಸAಸ್ಥೆಗಳು ಸಾಂಸ್ಕೃತಿಕ ಚಿಂತನೆಗಳೊoದಿಗೆ ಶೈಕ್ಷಣಿಕ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿರುವುದು ಪ್ರಶಂನೀಯ, ಈ ವ್ಯವಸ್ಥೆ ಪ್ರತಿಯೊಂದು ಸಂಘಸAಸ್ಥೆಗಳ ಮೂಲಕ ನಡೆದರೆ ಆ ಭಾಗಗಳು ಸಮೃದ್ಧಗೊಳ್ಳುತ್ತದೆ,ಸ್ಪರ್ಶ ಎಂಬ ಶೀರ್ಷಿಕೆ ಮನಮುಟ್ಟವಂತೆ ಕಾರ್ಯಕ್ರಮ ಸಂಯೋಜಿಸಿಕೊoಡಿದೆ ಇಂಥಹ ಯುವಕರ ಪಡೆ ಗ್ರಾಮಗ್ರಾಮಗಳಲ್ಲಿ ಪಸರಿಸಲಿ ಎಂದು ಶುಭಹಾರೈಸಿದರು.
ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಮಾತನಾಡಿ, ಬಾಳೆಬೆಟ್ಟು ಫ್ರೆಂಡ್ಸ್ ಹಾಗೂ ಭಗತ್‌ಸಿಂಗ್ ಯುವ ವೇದಿಕೆ ಉತ್ತಮ ಯುವ ಬಲವನ್ನು ಹೊಂದಿದೆ. ಸಂಘಟನೆಯ ಒಗ್ಗಟ್ಟು ಇದೇ ರೀತಿ ಮುಂದುವರಿಯಲಿ ಎಂದರು.

ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಅಧ್ಯಕ್ಷ ರತ್ನಾಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಿರಿಯ ರಂಗಕರ್ಮಿ, ನಿವೃತ್ತ ಮುಖ್ಯಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳ್‌ರಿಗೆ ಹುಟ್ಟೂರು ಸಮ್ಮಾನ ನೀಡಿ ಗೌರವಿಸಲಾಯಿತು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರವೀಂದ್ರ ಶೆಟ್ಟಿ, ನವೀನ್ ಪೂಜಾರಿಯವರನ್ನು ಗೌರವಿಸಲಾಯಿತು. ಸ್ಥಳೀಯ ಶೈಕ್ಷಣಿಕ ಸಾಧಕರಾದ ಪ್ರತಿಕ್ಷ, ಮಾನ್ಯ ,ಸುಧೀರ್ ನಾಯಕ್,ಶ್ರೀರಕ್ಷಾ ಶೆಟ್ಟಿ, ಕಾರ್ತಿಕ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಅಕ್ಷರ ದಾಸೋಹ ಶೈಕ್ಷಣಿಕ ಹೆಸರಿನಲ್ಲಿ ಬಡ ವಿದ್ಯಾರ್ಥಿ ನಿಶಾಂತ ಬಾಳೆಬೆಟ್ಟು ಇವರನ್ನು ದತ್ತು ಸ್ವೀಕರಿಸಲಾಯಿತು. ಹಾಗೂ ಸ್ಥಳೀಯ ಮಣೂರು ಶ್ರೀರಾಮಪ್ರಸಾದ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.ಇದೇ ವೇಳೆ ಪೆರ್ಡೂರು ಮೇಳದ ವ್ಯವಸ್ಥಾಪಕ ವೈ. ಕರುಣಾಕರ ಶೆಟ್ಟಿಯವರನ್ನು ಗೌರವಿಸಲಾಯಿತು.

ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಕೊಲ್ಲೂರು ದೇವಳದ ಟ್ಟಸ್ಟಿ ಬೆಳ್ವೆ ಗಣೇಶ್ ಕಿಣಿ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ದೇವೀಂದ್ರ ಎಸ್. ಬಿರಾದರ್, ಉದ್ಯಮಿ ಕುಶಲ್ ಶೆಟ್ಟಿ ಬಾಳೆಬೆಟ್ಟು,ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷ ಕೃಷ್ಣ ಗೊಲ್ಲ, ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಎಚ್. ಕುಂದರ್, ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುಬ್ರಾಯ ಆಚಾರ್ಯ, ಗುತ್ತಿಗೆದಾರ ಜಗದೀಶ್ ಕೆದೂರು,ಸಚಿವ ಕೋಟ ಆಪ್ತ ಸಹಾಯಕ ವಿವೇಕ್ ಅಮೀನ್, ಪಿ.ಡಿ.ಓ ಗಿರೀಶ್ ಕುಮಾರ್ ಶೆಟ್ಟಿ, ಶ್ರೀಂಗೇರಿಯ ಆಯುರ್ವೇದ ವೈದ್ಯ ಡಾ| ವಾಸುದೇವ ಉರಾಳ ಮಣೂರು ಉಪಸ್ಥಿತರಿದ್ದರು.
ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ, ಬಾಳೆಬೆಟ್ಟು ಫ್ರೆಂಡ್ಸ್ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ವಂದಿಸಿದರು.

ಗಮನ ಸೆಳೆದ ಅಟ್ಟಣಿಗೆ, ನಾಗವಲ್ಲಿ ಪ್ರಸಂಗ
ಸಭಾ ಕಾರ್ಯಕ್ರಮದ ಅನಂತರ ಪೆರ್ಡೂರು ಮೇಳದವರಿಂದ ಅಟ್ಟಣಿಗೆ ಆಟ ಯಕ್ಷಗಾನ ಪ್ರದರ್ಶನ ನಾಗವಲ್ಲಿ ಯಕ್ಷಗಾನ ಜನಮನ ರಂಜಿಸಿತು ವಿಶೇಷವಾಗಿ ನಾಗವಲ್ಲಿ ಪಾತ್ರದಲ್ಲಿ ಸುಧೀರ್ ಉಪ್ಪೂರ,ತೀರ್ಥಹಳ್ಳಿ ಗೋಪಾಲ್ ಆಚಾರ್ಯ,ಜನಾರ್ದನ ಗುಡಿಗಾರ,ಸೀತರಾಮ್ ಕುಮಾರ್,ಹೆನ್ನಬೈಲ್ ವಿಶ್ವನಾಥ್ ಪೂಜಾರಿ ಪ್ರಮುಖ ಯಕ್ಷ ಪಾತ್ರದಲ್ಲಿ ಗಮನ ಸೆಳೆದರು.

ಕೋಟದ ಮಣೂರು ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೋಟ ಇದರ ಆಶ್ರಯದಲ್ಲಿ ವರ್ಷೋತ್ಸವ `ಸ್ಪರ್ಶ’ ೨೦೨೨ ಕಾರ್ಯಕ್ರಮದಲ್ಲಿಹಿರಿಯ ರಂಗಕರ್ಮಿ, ನಿವೃತ್ತ ಮುಖ್ಯಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳ್‌ರಿಗೆ ಹುಟ್ಟೂರು ಸಮ್ಮಾನಿಸಲಾಯಿತು. ಉಡುಪಿ ಆದರ್ಶ ಆಸ್ಪತ್ರೆ ಇದರ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ, ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಅಧ್ಯಕ್ಷ ರತ್ನಾಕರ ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಎಚ್. ಕುಂದರ್, ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುಬ್ರಾಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply