ಉಡುಪಿ : ಶ್ರೀ ಕೃಷ್ಣಮಠದ ಚಂದ್ರಶಾಲೆಯಲ್ಲಿ, ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅನುಗ್ರಹ ಉಪಸ್ಥಿತಿಯಲ್ಲಿ,ಅಷ್ಟೋತ್ತರ ಶತ ‘ಪವಮಾನ ಮಂಡಲ’ ಹೋಮ ನಡೆಯುತ್ತಿದೆ.
53ನೇ ಪವಮಾನ ಮಂಡಲ ಹೋಮವನ್ನು ಉಡುಪಿಯ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇದಮೂರ್ತಿ ಅನಂತ ಉಪಾಧ್ಯಾಯ ನೆರವೇರಿಸಿದರು.