ಕೆ.ಎಲ್.ಕುಂಡಂತಾಯರ ಪುಸ್ತಕ ‘ಸೊಡರ ಹಬ್ಬ’ ಲೋಕಾರ್ಪಣೆ 

ಎಲ್ಲೂರು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ಪುಸ್ತಕ ‘ಸೊಡರ ಹಬ್ಬ’ ಬಿಡುಗಡೆಗೊಂಡಿತು. ದೇವಳದ ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ ಸೊಡರ ಹಬ್ಬವನ್ನು ಬಿಡುಗಡೆಗೊಳಿಸಿ  ಆಶೀರ್ವದಿಸಿದರು.
ದೇವಳದ ಆಡಳಿತಾಧಿಕಾರಿ‌ ಶ್ರೀಮತಿ ಮಮತಾ ವೈ ಶೆಟ್ಟಿ , ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವರಾಜ ರಾವ್ , ಪುಣೆ ಉದ್ಯಮಿ ಎರ್ಮಾಳು ನಾರಾಯಣ ಕೆ.ಶೆಟ್ಟಿ, ಸಂಜೀವ ಶೆಟ್ಟಿ , ನಿವೃತ್ತ ಪಾಂಶುಪಾಲ ಸುದರ್ಶನ ವೈ.ಎಸ್.ನಾಗರಾಜ ಉಡುಪ , ಶ್ರೀಧರ ಮಂಜಿತ್ತಾಯ ,ದುರ್ಗಾ ಮಿತ್ರಮಂಡಳಿ ಅಧ್ಯಕ್ಷ  ಚಂದ್ರ ಹಾಸ ಆಚಾರ್ಯ, ದೇವಳದ ಪ್ರಬಂಧಕ ರಾಘವೇಂದ್ರ ಶೆಟ್ಟಿ , ಸತೀಶ ಕುಂಡಂತಾಯ, ಭಾರ್ಗವ ಕುಂಡಂತಾಯ ಉಪಸ್ಥಿತರಿದ್ದರು.
 ಸೊಡರ ಹಬ್ಬ (ದೀಪಾವಳಿ,ಗೋಪೂಜೆ, ತುಳಸಿಪೂಜೆ,ಲಕ್ಷದೀಪ) ಪುಸ್ತಕದಲ್ಲಿ * ಬಲೀಂದ್ರ ಬರುತ್ತಾನೆ ’ಹಣತೆ’ ಹಚ್ಚೋಣ, * ಬಂದು ಹೋಗುವ ಬಲೀಂದ್ರನಿಗೆ ಬಹುಪರಾಕು’) * ಪೊಲಿ ಹಬ್ಬ ‘ * ಸೊಡರ ಹಬ್ಬಕ್ಕೆ ಸೊಬಗಿನ ಸೋಬಾನೆ’ * ಸಮೃದ್ಧಿಯ ಸಮುಲ್ಲಾಸ’ * ಸೊಬಗು ಸೊರಗಿದ ಸೊಡರ ಹಬ್ಬ’ * ದೀಪಾವಳಿಗಿಲ್ಲ ಕೃಷಿಯ ಸೊಂಪು’ * ಕ್ಷಮಿಸು ಬಲೀಂದ್ರ/ಮಾಪಿ ನಟ್ಟೊಂದು ಬಲೀಂದ್ರಗ್ ಲೆಪ್ಪು’ 
* ನಿಸರ್ಗ ನೀರೆಗೆ ನೀರಾಜನ, * ಬಲೀಂದ್ರೆ ಬರ್ಪೆ ಪೊಲಿ ಕೊರ್ಪೆ (ತುಳು ಲೇಖನ), * ಗೋಪೂಜೆಯ ಆಶಯ,* ತುಳಸಿ ಕಟ್ಟೆಗೆ ಬಲಬಂದು * ಉಬತ್ಥಾಪನಾ ಆಚರಣೆ, * ಎಲ್ಲೂರಿನ ದೀಪೋತ್ಸವ,*ಲಕ್ಷ್ಯ ಬೆಳಗುವ ಲಕ್ಷದೀಪೋತ್ಸವ ಮುಂತಾದ ಲೇಖನಗಳಿವೆ ಹಾಗೂ * ನಂದೊಳ್ಗೆ ಅಮುಣಿಂಜೆಗುತ್ತು ಶೀನಪ್ಪ ಹೆಗ್ಡೆ ಅವರು ೫೨ ಸಂಗ್ರಹಿಸಿ ೧೯೫೨ರಲ್ಲಿ ಪ್ರಕಟಿಸಿದ ’ತುಳುವಾಲ ಬಲಿಯೇಂದ್ರೆ’ ಪಾರ್ದನದ ಕೊನೆಯ ಭಾಗವನ್ನು ಸೇರಿಸಿ ಕೊಳ್ಳಲಾಗಿದೆ.

 

 
 
 
 
 
 
 
 
 
 
 

Leave a Reply