“ಕಾರ್ಕಡದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ, ಸನ್ಮಾನ, ಸಂಗೀತ ಸುಧೆ,ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ“

ಕನ್ನಡ ಸಾಹಿತ್ಯ ಪರಿಷತ್, ಬ್ರಹ್ಮಾವರ ಘಟಕ, ಉಡುಪಿ ಜಿಲ್ಲೆ ಕರ್ನಾಟಕ ಯಕ್ಷಧಾಮ, ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ,ಮಂಗಳೂರು ಮತ್ತು ಗೆಳೆಯರ ಬಳಗ (ರಿ) ಕಾರ್ಕಡ, ಸಾಲಿಗ್ರಾಮ. ಇವರ ಸಂಯುಕ್ತ ಆಶ್ರಯದಲ್ಲಿ “ಮನೆಯಂಗಳದಲ್ಲಿ ಸಾಹಿತ್ಯ” ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ “ಕನಕಾಂಗಿ ಕಲ್ಯಾಣ” ದಿನಾಂಕ: 22-04-2024 ಸೋಮವಾರ ಸಂಜೆ 3.30 ಕ್ಕೆ ಭೂಮಿಕಾ ಮನೆಯಂಗಳ, ಕಾರ್ಕಡದಲ್ಲಿ ಜರುಗಿತು.

ಈ ಸಮಾರಂಭದಲ್ಲಿ ಶ್ರೀ ದಿನೇಶ ಗಾಣಿಗ

( ಮಾಸ್ಟರ್ ಅತ್ಲೆಟಿಕ್ಸ್ ಸಾಧಕರು)

ಡಾ.ಕೆ. ಕೃಷ್ಣಮೂರ್ತಿ ಮಯ್ಯ

( ಡಾಕ್ಟರೇಟ್)

ಸುಮನಾ ಆರ್ ಹೇರ್ಳೆ

( ಸಾಹಿತಿ. ಕಲಾವಿದೆ)

ಶ್ರೀಮತಿ ಸವಿತಾ ಶಾಸ್ತ್ರಿ

(ಖ್ಯಾತ ಲೇಖಕಿ) ಇವರ ವಿಶಿಷ್ಟ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲೆಯ ಕಾ.ಸ. ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಜಿ. ರಾಮಚಂದ್ರ ಐತಾಳರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಕಲಾ ಸಾಹಿತಿ ಜನಾರ್ದನ ಹಂದೆ ದೀಪ ಪ್ರಜ್ವಲನೆ ಗೈದರು ಘರ್ಷಣೆಯಿಂದಲೇ ದೀಪದ ಹುಟ್ಟು ಸಾಧ್ಯವಾಗುವುದು. ಅಂತಯೇ ಮನಸ್ಸು ಮತ್ತು ಹೃದಯದ ಭಾವದೀಪದ ತಾಕಲಾಟದಿಂದ ಸಾಹಿತ್ಯದ ಹುಟ್ಟು. ದೀಪದಿಂದ ದೀಪ ಬೆಳಗುವ ಹಾಗೆ ಮನೆ ಅಂಗಳ ಸಾಹಿತ್ಯದ ದೀಪ ಕನ್ನಡ ಸಾಹಿತ್ಯ ಜ್ಯೋತಿಯನ್ನು ಬೆಳಗಬಲ್ಲದು. ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳರ ಮನೆಯಂಗಳದಲ್ಲಿ ನಡೆಯುತ್ತಿರುವ ಸತತ ಸಾಹಿತ್ಯಾರಾಧನೆ ಶ್ಲಾಘನೀಯಎಂದು ಕಲಾ ಸಾಹಿತಿ ಮಂಗಳೂರಿನ ಶ್ರೀ ಎಚ್ .ಜನಾರ್ದನ ಹಂದೆ ಹೇಳಿದರು.

ಸಮಾರಂಭದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾದ ಕೆ. ತಾರನಾಥ ಹೊಳ್ಳ, ಬ್ರಹ್ಮಾವರ ತಾಲೂಕಿನ ಹಾಗೂ ಉಡುಪಿ ಜಿಲ್ಲಾ ಕ ಸಾ ಪ ಪದಾಧಿಕಾರಿಗಳು . ಗೆಳಯರ ಬಳಗದ ಪದಾಧಿಕಾರಿಗಳು,ಸದಸ್ಯರು,ಉಪಸ್ಥಿತರಿದ್ದರು.ಕ ಸಾ ಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಇವರು

ಇದೇ ಸಂದರ್ಭದಲ್ಲಿ ಸುಮನಾ ಆರ್ ಹೇರ್ಳೆ ಅವರ *ದಡ ಸೇರದ ಅಲೆಗಳು* ಎನ್ನುವ ಗಝಲ್ ಸಂಕಲನ ಮತ್ತು *ಸುಮನಸಾರ* ಎನ್ನುವ ಷಡ್ದಳ ಮುಕ್ತಕಗಳ ಸಂಕಲನಗಳನ್ನು ಬಿಡುಗಡೆ ಮಾಡಿದರು.ಸನ್ಮಾನ ಪತ್ರ ಶ್ರೀ ಶ್ರೀಪತಿ ಹೇರ್ಳೆ,ಕೆ. ಶ್ರೀಕಾಂತ ಐತಾಳ , ಕೆ ಚಂದ್ರಶೇಖರ ಸೋಮಯಾಜಿ ಹಾಗೂ ಕೆ. ಶೇಖರ ಓದಿದರು.

ಬಳಗದ ಉಪಾಧ್ಯಕ್ಷ ಶ್ರೀ ಕೆ . ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಬಳಗದ ಅಧ್ಯಕ್ಷ ಪ್ರಾಸ್ಥಾವಿಕ ಮಾತನಾಡಿದರು. ಬಳಗದ ಕಾರ್ಯದರ್ಶಿ ಕೆ. ಶೀನ ವಂದಿಸಿದರು. ಪ್ರಾರಂಭದಲ್ಲಿ ಕೆ. ಚಂದ್ರಕಾಂತ ನಾಯರಿ ಹಾಗೂಸ್ಥಳೀಯ ಪ್ರತಿಭೆಗಳಿಂದ ಭಾವಗೀತೆ, ಕನ್ನಡ ನಾಡು ನುಡಿ ಬಿಂಬಿಸುವ ಹಾಡು, ನೃತ್ಯಇತ್ಯಾದಿ ಜರುಗಿ ಕೊನೆಯಲ್ಲಿ “ಮಯ್ಯ ಯಕ್ಷಬಳಗ, ಹಾಲಾಡಿ“ ಇವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ, “ಕನಕಾಂಗಿ ಕಲ್ಯಾಣ” ಜನಮನ ರಂಜಿಸಿತು.

 
 
 
 
 
 
 
 
 
 
 

Leave a Reply