ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾಯ೯ಕ್ರಮ

ಉಡುಪಿ :- ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಜೇಸಿಐ ಭಾರತ ವಲಯ 15 ರ ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ರವರ ಅಧಿಕೃತ ಭೇಟಿ ಕಾಯ೯ಕ್ರಮ ಅ.27 ರಂದು ಗುರುವಾರ ಸಿ.ಎಸ್.ಐ ಬಾಲಕರ ಹಾಸ್ಟೆಲ್ ಸಭಾಂಗಣದಲ್ಲಿ ನಡೆಯಿತು.
ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ , ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನದ ಶ್ರೇಷ್ಠ ಸಂಸ್ಥೆಯಾಗಿದ್ದು ಇಲ್ಲಿರುವ ವಿವಿಧ ರೀತಿಯ ತರಬೇತಿ ಪಡೆದು ಉತ್ತಮ ಜೀವನ ಸಾಗಿಸಬಹುದು. ಈ ಘಟಕದ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ವಲಯ ಪ್ರಥಮ ಮಹಿಳೆ ಮರಿಯಾ ರೋಡಿಗ್ರಸ್, ವಲಯಾಧಿಕಾರಿಗಳಾದ ಮೋಹನ್ ನಕ್ರೆ, ಉದಯ ನಾಯ್ಕ, ಘಟಕಾಧ್ಯಕ್ಷ ಡಾII ವಿಜಯ್ ನೆಗಳೂರು, ಮಹಿಳಾ ಜೇಸಿ ಅಧ್ಯಕ್ಷೆ ಡಾII ಚಿತ್ರಾ ನೆಗಳೂರು, ನೈನಾ ನಾಯಕ್ ಮುಂತಾದವರಿದ್ದರು. ಈ ಸಂದಭ೯ದಲ್ಲಿ ವಲಯಾಧ್ಯಕ್ಷ ದಂಪತಿಗಳನ್ನು ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply