ISC ಮಣಿಪಾಲ ಲೇಜಿನ್ ನಿಂದ 170 ಜನರಿಗೆ ಊಟದ ಪೊಟ್ಟಣ ವಿತರಣೆ

ಉಡುಪಿ:ಈ ಲಾಕ್ಡೌನ್ ಸಂದರ್ಭದಲ್ಲಿ ಸ್ವಾರ್ಥಕ್ಕೂ ಮುನ್ನ ಸೇವೆ ಎಂಬ ಮುನ್ನುಡಿಯೊಂದಿಗೆ ISC ಮಣಿಪಾಲ ಲೇಜಿನ್ ಹಮ್ಮಿಕೊಂಡಿರುವ ಬಡವರ ಹಸಿವೆ ನೀಗಿಸುವ ಕಾರ್ಯಕ್ರಮ ಸೋಮವಾರ ಪ್ರಾರಂಭವಾಗಿದೆ.

ದಾನಿಗಳ ಪ್ರಯೋಜಕತ್ವದಲ್ಲಿ ದಿನವೊಂದಕ್ಕೆ 170ಮೇಲ್ಪಟ್ಟು ಜನರಿಗೆ ಊಟದ ಪೊಟ್ಟಣವನ್ನು ನೀಡಿರುತ್ತಾರೆ.ಇಂಡಿಯನ್ ಸೀನಿಯರ್ ಚೆoಬರ್ ನ ರಾಷ್ಟೀಯ ನಿರ್ದೇಶಕ ಚಿತ್ರಕುಮಾರ್,ಗುಂಡಿಬೈಲು ವಾರ್ಡಿನ ನಗರ ಸಭಾ ಸದಸ್ಯ ಪ್ರಭಾಕರ್ ಪೂಜಾರಿ, ಲೇಜಿನ ನ ಅಧ್ಯಕ್ಷೆ ಪ್ರೀತಿ ತಂಗಪ್ಪನ್,ಖಜಾಂಚಿ ಸುರೇಶ ಶೇರಿಗಾರ್, ಸದಸ್ಯ ಚಂದ್ರ ಅಮೀನ್ ಬಿ, ಪುರುಷೋತ್ತಮ ಭಟ್,ನೀಲೇಶ್ ನಾಯ್ಕ್, ಪ್ರಸನ್ನಕುಮಾರ್, ರಂಜಿತ್ ಸುವರ್ಣ, ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply