ಉಡುಪಿ:- ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ(ರಿ) ಮಣಿಪಾಲ ಇದರ ಹದಿನೆಂಟನೇ ವಾರ್ಷಿಕ ಮಹಾಸಭೆ ರವಿವಾರ ಆರ್ಎಸ್ಬಿ ಸಭಾಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್.ನಾಯಕ್ ವಹಿಸಿದ್ದರು. ಜೊತೆಕಾರ್ಯದರ್ಶಿ ಜಯಶ್ರೀ ಜಿ. ನಾಯಕ್ ವರದಿ ಓದಿದರು. ಕೋಶಾಧಿಕಾರಿ ಗೀತಾ ಎಸ್ ನಾಯಕ್ ಲೆಕ್ಕಪತ್ರ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಸಿ.ಎ.ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊ0ದಿಗೆ ತೇರ್ಗಡೆ ಹೊಂದಿದ ಸಮಾಜದ ಹೆಮ್ಮೆಯ ಯುವ ಪ್ರತಿಭೆಗಳಾದ ಶಶಾಂಕ್, ಸಂತೋಷ್, ಭೂಮಿಕಾ, ಸುಬ್ರಹ್ಮಣ್ಯ, ಸುಪ್ರೀತಾ, ಶ್ರೀಕಾಂತ್, ರಜತ್ ಇವರನ್ನು, ಹಾಗೂ ಜೆಇಇ ಪರೀಕ್ಷೆಯಲ್ಲಿ ಆಲ್ಇಂಡಿಯಾದಲ್ಲಿ 16ನೇ ರ್ಯಾಂಕ್ ಗಳಿಸಿದ ಅಭಯ್ರವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ಬಿಡುಗಡೆಗೊಂಡ ಆರ್ಎಸ್ಬಿ ಕೊಂಕಣಿ ಭಾಷಾ ಪ್ರಪ್ರಥಮ ಚಲನಚಿತ್ರ “ಅಮ್ಚೆ ಸಂಸಾರ್” ಇದರ ಪ್ರಬುದ್ಧ ಕಲಾವಿದರಾಗಿ ಮೂಡಿಬಂದ ಸುಮತಿ ಕಾಮತ್, ಕುಸುಮಾ ಕಾಮತ್, ಭವ್ಯರಾಜೇಶ್ ರವರನ್ನು ಸನ್ಮಾನಿಸಲಾಯಿತು.
ಆನ್ಲೈನ್ ಕಾರ್ಯಕ್ರಮ ನೀಡಿದ ಡಾ.ಅಕ್ಷತಾ, ಡಾ.ರಶ್ಮೀ, ವೇದಿಕೆಯ ಲೋಗೋ ತಯಾರಿಸಿದ ಸ್ತುತಿ ನಾಯಕ್ರವರನ್ನು ಅಭಿನಂದಿಸಲಾಯಿತು. ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಸಭಿಕರ ಪರವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಡಾ.ಅಕ್ಷತಾ ನಾಯಕ್, ಗೌರವ ಅಧ್ಯಕ್ಷೆ ಸುನೀತಾ ನಾಯಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ನಿರ್ಮಲಾ ಜಿ.ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಡಾ.ವಿದ್ಯಾಲತಾ ಧನ್ಯವಾದವಿತ್ತರು. ರೂಪಾ ನಾಯಕ್, ಸುಮಿತ್ರಾ ನಾಯಕ್ ನಿರೂಪಿಸಿದರು.