ಇ-ಅದಾಲತ್ ಮೂಲಕ ತ್ವರಿತ ನ್ಯಾಯ : ನ್ಯಾ.ಅರವಿಂದ ಕುಮಾರ್

ಆಗಸ್ಟ್, 28- ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇ-ಲೋಕ ಅದಾಲತ್ ಗಳ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳ ಬಹುದಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ತಿಳಿಸಿದರು. ಅವರು ಶುಕ್ರವಾರದಂದು ಮೇಘಾ ಇ-ಲೋಕ್ ಅದಾಲತ್ ಕುರಿತು ವಿಡಿಯೋ ಸಂವಾದದ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಕಕ್ಷಿದಾರರು ವಕೀಲರ ಮೂಲಕ ಅಥವಾ ನೇರವಾಗಿ ಈ ಮೇಲ್ ಮೂಲಕ ರಾಜೀ ಸಂಧಾನಕ್ಕೆ ಪ್ರಸ್ತಾಪಿಸುವುದರೊಂದಿಗೆ , ಉಭಯ ಕಕ್ಷಿದಾರರು ನ್ಯಾಯಾಧೀಶರ ಮಧ್ಯಸ್ಥಿಕೆ ಮೂಲಕ ಕೇಸ್ ಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.
ಇ-ಲೋಕ ಅದಾಲತ್ ನಲ್ಲಿ , ಸರ್ವರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ರಾಜೀ ಸಂಧಾನ ಮೂಲಕ ಶೀಘ್ರವಾಗಿಇತ್ಯರ್ಥ ಪಡಿಸಿಕೊಳ್ಳಬಹುದಾದ , ಮೋಟಾರ್ ವಾಹನ ಅಪಘಾತ ನಷ್ಠ ಪರಿಹಾರ, ರಾಜೀ ಆಗಬಹುದಾದ ಕ್ರಿಮಿನಲ್ ಕೇಸ್ಗಳು, ಸಿವಿಲ್ ಮೊಕದ್ದಮೆಗಳು, ಮನಿ ಸೂಟ್, ಚೆಕ್ ಭೌನ್ಸ್ ಪ್ರಕರಣಗಳು ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಪರಿಹರಿಸಿ ಕೊಳ್ಳಬಹುದಾಗಿದೆ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ತಿಳಿಸಿದರು.
ನ್ಯಾಯಮೂರ್ತಿ ಅಲೋಕ್ ಆರಾಧ್ಯ ಮಾತನಾಡಿ, ರಾಜ್ಯಾದ್ಯಂತ ನಡೆಯುವ ಇ-ಲೋಕ ಅದಾಲತ್ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ತಮ್ಮ ಪ್ರಕರಣಗಳನ್ನು ಕಡಿಮೆ ಅವಧಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 25 ರಿಂದ ಮೇಘಾ ಇ-ಲೋಕ್ ಅದಾಲತ್ ಆರಂಭಗೊಂಡು 147 ಪ್ರಕರಣಗಳುಇತ್ಯರ್ಥ ಗೊಂಡಿದ್ದು, ಅವುಗಳಲ್ಲಿ 79 ಮೋಟಾರು ವಾಹನ ನಷ್ಠ ಪರಿಹಾರ ದಾವೆಯಲ್ಲಿ 2,38,84,000.00 ಗಳ ನಷ್ಠ ಪರಿಹಾರ ನೀಡಲು ಆದೇಶವಾಗಿದ್ದು, ಸಿವಿಲ್ ದಾವೆ 18 , ಇತರೆ ಕ್ರಿಮಿನಲ್ ಮೊಕದ್ದಮೆಗಳು 18, ಚೆಕ್ ಬೌನ್ಸ್ 28 ಹಾಗೂ ಕ್ರಿಮಿನಲ್ ಕೇಸ್ ಗಳು 4 ರಾಜಿಯಾಗಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ತಿಳಿಸಿದರು.
 
 
 
 
 
 
 
 
 
 
 

Leave a Reply