ಪೋಕ್ಸೊ ಕಾಯ್ದೆ ಅಡಿಯಲ್ಲಿ ಜೈಲು ಸೇರಿದ್ದ ಯುವಕ ತನಗೆ ಬೇಲು ಸಿಗುವುದಿಲ್ಲ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ತಾಲ್ಲೂಕಿನ ಅಡವಿಸೋಮಾಪುರ ತಾಂಡಾದ ರಾಜು ಲಮಾಣಿ (19) ಮೃತ ದುರ್ದ್ಯವಿಯಾಗಿದ್ದಾನೆ.
ಆದರೆ ವಿಧಿಯಾಟ, ಗುರುವಾರ ಸಂಜೆಯೇ ವಿಚಾರಣಾದೀನ ಖೈದಿಯಾಗಿದ್ದ ರಾಜು ಲಮಾಣಿ ಅವರಿಗೆ ಬೇಲ್ ಸಿಕ್ಕಿತ್ತು, ಆದರೆ, ಕೋರ್ಟ್ ವೇಳೆ ಮುಗಿದಿದ್ದರಿಂದ ಬೇಲ್ ಸಿಕ್ಕಿರುವ ಮಾಹಿತಿ ಕಾರಾಗೃಹಕ್ಕೆ ಹೋಗಿರಲಿಲ್ಲ.