ಕಾಫಿ & ಕೋಸ್ಟ್ ಕಾರ್ಯಕ್ರಮ

ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ಮಂತ್ರ ಪ್ರವಾಸೋದ್ಯಮ, ಕಂಟ್ರಿ ಇನ್ ಅಂಡ್ ಸೂಟ್ಸ್ ಮಣಿಪಾಲದ ಸಹಯೋಗದೊಂದಿಗೆ ನವೆಂಬರ್ 24, 25 ಮತ್ತು 26 ರ ವರೆಗೆ 3 ದಿನಗಳ ಕಾಲ “ಕಾಫಿ ಅಂಡ್ ಕೋಸ್ಟ್” (ಪಾನ್ ಇಂಡಿಯಾ) ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ 2 ದಿನಗಳ ಕಾಲ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ವಿವರಗಳನ್ನು ಹಾಗೂ ಚಟುವಟಿಕೆಗಳನ್ನು ತಿಳಿಯಲು ಭಾರತದಾದ್ಯಂತ ಇರುವ 55 ಹೆಸರಾಂತ ಟ್ರಾವೆಲ್ ಕಂಪನಿ ಪ್ರತಿನಿಧಿಗಳು, ಟ್ರಾವೆಲ್ ಏಜೆಂಟ್, ಬ್ಲಾಗರ್ಸ್, ಬರಹಗಾರರು ಆಗಮಿಸಿದ್ದು, ಇಂದು ದಿನಾಂಕ 25-11-2022 ರಂದು ಮಣಿಪಾಲದ ಹೊಟೇಲ್ ಕಂಟ್ರಿ ಇನ್ ಅಂಡ್ ಸೂಟ್ಸ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ, ಕರ್ನಾಟಕ ಟೂರಿಸಂ ಫೋರಂ ಸಂಸ್ಥಾಪಕರಾದ ರವಿ, ನಿರ್ದೇಶಕರಾದ ಸಂದೀಪ್ ದುಮಾಲೆ, ಕಾರ್ಯದರ್ಶಿಗಳಾದ ರಮ್ಯಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply