ವೇಷ ಧರಿಸಿ ಆಶಕ್ತರಿಗೆ ಸಹಾಯ ಹಸ್ತ ವಿತರಿಸಿ ಮಾದರಿಯಾದ ಧೀರಜ್

ಉಡುಪಿ : ಕರಂಬಳ್ಳಿ ಸವಿತಾ ಶೆಟ್ಟಿ ಹಾಗೂ ವೇಷಧರಿಸಿದ ಧೀರಜ್ ಮನೆಮನೆಗೆ ತೆರಳಿ ಹಣ ಸಂಗ್ರಹಿಸಿ ಅಶಕ್ತರಿಗೆ ಸಹಾಯ ಮಾಡಿದ್ದಾರೆ.

ಪೇಂಟಿಂಗ್ ನಲ್ಲಿ ಸಹಕರಿಸಿದ ಸಾಗರ್, ಅಜೇಯ್, ಶಿಲ್ಪ,ಭಾರತಿ, ದೀಕ್ಷಾ,ಸ್ವಾತಿ ಹಾಗೂ ಪುಟಾಣಿ ಭೂಮಿಕ ನೇತೃತ್ವದಲ್ಲಿ ವಿಶೇಷ ವೇಷ ಧರಿಸಿ ಸಂಗ್ರಹಗೊಂಡ ಹಣದಲ್ಲಿ ಆಶಕ್ತರಾದ ಕುಂಜಾಲು ಸರಸ್ವತಿಗೆ 20 ಸಾವಿರ ರೂ ,ಕರ್ಜೆಯ ವಸಂತ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ವೈದ್ಯಕೀಯ ಚಿಕಿತ್ಸೆಗೆ 5 ಸಾವಿರ ರೂ ಧನ ಸಹಾಯ ವಿತರಿಸಿದ್ದಾರೆ.

ಬಹಳಷ್ಟು ಜನ ವೇಷ ಧರಿಸಿ ಬಂದ ಹಣವನ್ನು ಸ್ವಂತ ಖರ್ಚಿಗೆ ಬಳಸಿದರೆ ಇವರು ಕಷ್ಟದಲ್ಲಿದ್ದರೂ ವೇಷ ಧರಿಸಿ ಸಂಗ್ರಹಗೊಂಡ ಹಣವನ್ನು ಆಶಕ್ತ ರೋಗಿಗಳಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸವಿತಾ ಅಂತರಾಷ್ಟ್ರೀಯ ಮಟ್ಟದ ಹಿರಿಯ ಕ್ರೀಡಾಪಟುವಾಗಿ ಉತ್ತಮ ಹೆಸರು ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply