ಉಡುಪಿ : ಮಹಿಳೆಯರಿಗೆ 3 ತಿಂಗಳ ಸೌಂದರ್ಯ ವರ್ಧಕ ತರಬೇತಿ ಶಿಬಿರ

ಉಡುಪಿ : ನೆಹರು ಯುವ ಕೇಂದ್ರ ಉಡುಪಿ ಮತ್ತು ಶ್ರೀ ಭಗವತಿ ಮಹಿಳಾ ಸಂಘ ನೇಜರು ಇವರ ಸಂಯುಕ್ತ ಆಶ್ರಯದಲ್ಲಿ “ಮಹಿಳೆಯರಿಗೆ, 3 ತಿಂಗಳ ಸೌಂದರ್ಯ ವರ್ಧಕ ತರಬೇತಿ ಶಿಬಿರ” ಭಗವತಿ ತೀಯ ಸಮಾಜ ನೇಜರು ಇದರ ಸಭಾಂಗಣ ಇದರಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೃಷ್ಣ ದೇವಾಡಿಗ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ವಿಲ್ಫ್ರೇಡ್ ಡಿ’ಸೋಜಾ ಇವರು ನೇರವೇರಿಸಿದರು.

ಮುಖ್ಯ ಅತಿಥಿ ಯಾಗಿ ತೀಯ ಸಮಾಜದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕೆ ಸಾಲಿಯಾನ್, ಎಲ್ ಎಂ ತೋನ್ಸೆ, ಗಂಗಾಧರ್ ಕೆ ಬಿ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಗಂಗಾಧರ್ ಉಪಸ್ಥಿತರಿದ್ದರು. ಸೀಮಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿ ಸುರೇಖಾ ದಯಾನಂದ ವಂದಿಸಿದರು.

 
 
 
 
 
 
 
 
 
 
 

Leave a Reply