ಕರಾವಳಿಯಲ್ಲಿ ಆರಂಭಗೊಳ್ಳಲಿದೆ ಮತ್ತೊಂದು ಟೋಲ್!

ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್‌)ವು ಪಡುಬಿದ್ರಿ – ಕಾರ್ಕಳದ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದಲ್ಲಿ ಟೋಲ್‌ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದೆ. 3 ವರ್ಷಗಳ ಅವಧಿಗೆ ಟೆಂಡರನ್ನು ಹಾಸನ – ಬೆಂಗಳೂರು ಮೂಲದ ರವಿ ಮೋಕ್ಷಿತ್‌ ಕಂಪೆನಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಕಂಪೆನಿಯು ಕರಾರು ಪತ್ರಗಳ ಕೆಲಸ ಕಾರ್ಯಗಳನ್ನು ಮುಗಿಸಿ ಮುಂದಿನ ಒಂದೆರಡು ತಿಂಗಳಲ್ಲಿ ಟೋಲ್‌ಗೇಟ್‌ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಹೆಜಮಾಡಿ ಟೋಲ್‌ನಲ್ಲಿರುವಂತೆ ಇಲ್ಲೂ ಪಡುಬಿದ್ರಿಯ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಒದಗಿಸುವುದಾಗಿ ಮೂಲಗಳು ತಿಳಿಸಿವೆ.

 
 
 
 
 
 
 
 
 
 
 

Leave a Reply