ಶ್ರೀಕೃಷ್ಣಮಠದಲ್ಲಿ ಉಡುಪಿಯ ಎಸ್.ಎಮ್.ಎಸ್.ಪಿ. ಸಭೆಯ ವಾರ್ಷಿಕಮಹಾಸಭೆ 

ದಿನಾಂಕ ೨೨.೦೩.೨೦೨೪ ರಂದು ಶ್ರೀಕೃಷ್ಣಮಠದಲ್ಲಿ ಉಡುಪಿಯ ಎಸ್.ಎಮ್.ಎಸ್.ಪಿ. ಸಭೆಯ ವಾರ್ಷಿಕಮಹಾಸಭೆ ಪರ್ಯಾಯ ಪೀಠಾಧೀಶರಾದ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಾಧ್ಯಕ್ಷರಾದ ಶ್ರೀಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದರು ಉಪಸ್ಥಿತರಿದ್ದರು.

ಕಾರ್ಯದರ್ಶಿಗಳಾದ ಶ್ರೀ ಗೋಪಾಲಜೋಯಿಸರು ಎಲ್ಲರನ್ನೂ ಸ್ವಾಗತಿಸಿ ೨೦೨೨-೨೩ ಸಾಲಿನ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿಗಳಾದ ಶ್ರೀ ಚಂದ್ರಶೇಖರಾಚಾರ್ಯರು ಲೆಕ್ಕಪತ್ರಗಳ ವರದಿಯನ್ನು ಮಂಡಿಸಿದರು. ಅಷ್ಟಮಠಗಳ ಪ್ರತಿನಿಧಿಗಳು ಮತ್ತು ಸಭೆಯ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸತ್ಯನಾರಾಯಣ ವೆಂಕಟರಾವ್ ಅವರು ಧನ್ಯವಾದಗಳನ್ನು ಅರ್ಪಿಸಿದರು.

 
 
 
 
 
 
 
 
 
 
 

Leave a Reply