ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಶಾಖೆಯ ಸಮಾಜ ಸೇವಾ ಕಾರ್ಯಗಳಿಗಾಗಿ ಉಡುಪಿ ಕಾಡಬೆಟ್ಟು ನಿವಾಸಿ ಪ್ರಸ್ತುತ ಅಮೇರಿಕಾದ ಚಿಕಾಗೋ ನೆಲೆಸಿರುವ ಡಾ. ಅಜಿತ್ ಕ್ಯಾಸ್ಟಲಿನೊ ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಚೆಕ್ ನ್ನು ಕೊಡುಗೆಯಾಗಿ ನೀಡಿದ್ದರು.
ಅವರ ಸಹೋದರ ಆಲ್ವಿನ್ ಕ್ಯಾಸ್ಟಲಿನೊ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ. ತಲ್ಲೂರು ಶಿವರಾಮ ಶೆಟ್ಟಿಯವರಿಗೆ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ. ಗೌರವ ಕಾರ್ಯದರ್ಶಿ ಕೆ ಜಯರಾಂ ಆಚಾರ್ಯ ಸಾಲಿಗ್ರಾಮ, ಗೌರವ ಖಜಾಂಚಿ ಡಾ ಅರವಿಂದ ನಾಯಕ್ ಅಮ್ಮುಂಜೆ, ಡಿಡಿಆರ್ ಸಿ ಕಾರ್ಯದರ್ಶಿ ಕೆ ಸನ್ಮತ್ ಹೆಗ್ಡೆಯವರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು. ರೆಡ್ ಕ್ರಾಸ್ ಸಿಬ್ಬಂದಿ ಹಾಗೂ ಡಿಡಿಆರ್ ಸಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.