ಶೂನ್ಯ ನೆರಳಿನ ದಿನ- ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಿದ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು

ಶೂನ್ಯ ನೆರಳಿನ ದಿನ – ಈ ಖಗೋಳ ವಿದ್ಯಮಾನವನ್ನು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು, 25 ಏಪ್ರಿಲ್ 2023 ರಂದು ವೀಕ್ಷಿಸಿದರು.

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಈ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳು ಮಧ್ಯಾಹ್ನ ೧೨. ೨೯ಕ್ಕೆ ವಿವಿಧ ವಸ್ತುಗಳ ನೆರಳುಗಳು ಕಣ್ಮರೆಯಾಗಿರುವುದನ್ನು ಗಮನಿಸಿದರು.

PAAC ನ ವಿದ್ಯಾರ್ಥಿಗಳು ಹಲವಾರು ವಸ್ತುಗಳನ್ನು ತಂದು ಈ ವಿದ್ಯಮಾನವನ್ನು ನೋಡಿ ಆನಂದಿಸಿದರು. ಶೂನ್ಯ ನೆರಳಿನ ಕ್ಷಣದಲ್ಲಿ ಮಾತ್ರ ಪ್ರದರ್ಶಿಸಬಹುದಾದ ಕೆಲವು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಡಾ. ಎ . ಪಿ . ಭಟ್, PAACನ ಸ್ಥಾಪಕ ಸಂಯೋಜಕರು ಹಾಗೂ ಉಡುಪಿಯ ಪೂರ್ಣಪ್ರಜ್ಞ ಸಂಸ್ಥೆಗಳ ಆಡಳಿತಾಧಿಕಾರಿ, ಇವರು ವಿದ್ಯಾರ್ಥಿಗಳಿಗೆ ಈ ವಿದ್ಯಮಾನದ ಹಿಂದಿನ ಖಗೋಳವಿಜ್ಞಾನವನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ.,
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ವಿನಯ್ ಕುಮಾರ್, ಕಾಲೇಜಿನ ವಿವಿಧ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

1 COMMENT

Leave a Reply