ತಲ್ವಾರ್ ತೋರಿಸಿ ಬೆದರಿಸಿರುವ ದುಷ್ಟ ಶಕ್ತಿಗಳನ್ನು ತಕ್ಷಣ ಬಂಧಿಸಬೇಕು ~ನಯನಾ ಗಣೇಶ್

ಶಾಸಕ ಹರೀಶ್ ಪೂಂಜಾ ರ ವಾಹನ ತಡೆದು ತಲ್ವಾರ್ ತೋರಿಸಿ ಬೆದರಿಸಿರುವ ದುಷ್ಟ ಶಕ್ತಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕರಾವಳಿ ಜಿಲ್ಲೆ ಅನೇಕ ದಿನಗಳಿಂದ ಶಾಂತಿಯ ವಾತಾವರಣದಲ್ಲಿದ್ದು, ಕೆಲವು ಶಕ್ತಿಗಳು ಅಶಾಂತಿಯ ವಾತಾವರಣ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ, ನಮ್ಮ ಪಕ್ಷದ ಶಾಸಕರಾದ ಹರೀಶ್ ಪೂಂಜಾ ರು ನಿನ್ನೆ ರಾತ್ರಿ ಕ್ಷೇತ್ರಕ್ಕೆ ವಾಪಸ್ ಸಂದರ್ಭ ಕಾರಿಗೆ ಅಡ್ಡಹಾಕಿ ಚಾಲಕನಿಗೆ ತಲ್ವಾರ್ ತೋರಿಸಿ ಬೆದರಿಸಿದ್ದು ಖಂಡನೀಯ,ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ,ತಕ್ಷಣ ಅಪರಾಧಿಗಳನ್ನು ಬಂಧಿಸಿ ಸಮಾಜಘಾತುಕ ರ ಮೇಲೆ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply