ಕುಸಿಯುವ ಭೀತಿಯಲ್ಲಿ ಮುಂಡ್ಕೂರು-ಜಾರಿಗೆ ಕಟ್ಟೆ ಸಂಪರ್ಕದ ಪಾಡಿತಾರ್ ಸೇತುವೆ

 ಮುಂಡ್ಕೂರು-ಜಾರಿಗೆ ಕಟ್ಟೆ ಸಂಪರ್ಕದ ಪಾಡಿತಾರ್ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು, ಈ ಸೇತುವೆಯ ಮೇಲೆ ಘನ ವಾಹನಗಳು ಸಂಚರಿಸುವಾಗ ಪಕ್ಕದಲ್ಲಿ ಇರುವ ಇಂಜಿನಿಯರ್ ಶ್ರೀ ಉಮೇಶ್ ಕಾಮತ್ ರವರ ಮನೆಯ ಒಳಗೆ ಭೂಕಂಪದ ಅನುಭವವಾಗುತ್ತಿದ್ದು, ಅಪಾಯದ ಕರೆಗಂಟೆ ಈಗಾಗಲೇ ಬಾರಿಸುತ್ತಿದೆ.

ಈ ಸೇತುವೆ ಕುಸಿದರೆ ಜಾರಿಗೆ ಕಟ್ಟೆ ಮಧ್ಯೆ ಸಂಪರ್ಕ ಕಡಿತವಾಗಿ ಅಕ್ಕಪಕ್ಕದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತದೆ. ಸೇತುವೆ ಕುಸಿದರೆ ಪಕ್ಕದ ಕಿನ್ನಿಗೋಳಿ-ಮೂಡಬಿದ್ರೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿ ವಾಹನ ಚಾಲಕರು ಹಾಗೂ ಜನಸಾಮಾನ್ಯರು ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಾರೆ.

 ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಈ ಬಗ್ಗೆ ತುರ್ತು ಗಮನಹರಿಸಿ ಸಂಬಂಧಪಟ್ಟ ಇಲಾಖೆಯವರ ಮೂಲಕ ಸೇತುವೆಯ ಭದ್ರತೆ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತುರ್ತು ಗಮನ ಹರಿಸಬೇಕಾಗುತ್ತದೆ.

…. ಸಾಣೂರು ನರಸಿಂಹ ಕಾಮತ್

 
 
 
 
 
 
 
 
 
 
 

Leave a Reply