ಕೊಲ್ಲೂರು -ಜಲಪಾತಕ್ಕೆ ಬಿದ್ದಿದ್ದ ಯುವಕನ ಶವ ವಾರದ ಬಳಿಕ ಬಂಡೆಯ ಎಡೆಯಲ್ಲಿ ಪತ್ತೆ

ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಕಳೆದ ಜು.23ರಂದು ನೀರುಪಾಲಾಗಿದ್ದ ಯುವಕ ಶರತ್‌ ಕುಮಾರ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.

ಭಾನುವಾರ ಬೆಳಗ್ಗೆ ಅರಶಿನ ಗುಂಡಿ‌ ಜಲಪಾತದಿಂದ 200 ಮೀಟರ್ ಕೆಳಗಡೆ ಬಂಡೆ ಕಲ್ಲಿನ ಒಳಗಡೆ ಶರತ್ ಮೃತದೇಹ ಸಿಲುಕಿ ಹಾಕಿಕೊಂಡಿತ್ತು ಎಂದು ಶೋಧ ಕಾರ್ಯ ನಡೆಸಿದ್ದ ತಂಡ ಮಾಹಿತಿ ನೀಡಿದೆ.

ಜುಲೈ 23ರಂದು ಬಂಡೆಕಲ್ಲಿನ ಮೇಲೆ ನಿಂತಿದ್ದಾಗ ಕಾಲುಜಾಲು ಜಾರಿ‌ ಜಲಪಾತಕ್ಕೆ ಬಿದ್ದಿದ್ದ ಶರತ್ ಬಳಿಕ ನಾಪತ್ತೆಯಾಗಿದ್ದರು. ನಿರಂತರ ಶೋಧ ಕಾರ್ಯದ ಬಳಿಕ ಶರತ್‌ ಮೃತದೇಹವನ್ನು ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರ‌ ಕಾರ್ಯಾಚರಣೆ ಮೂಲಕ ಹೊರ ತೆಗೆದಿದ್ದಾರೆ.

ಚಿತ್ರದುರ್ಗದ ಕೋತಿರಾಜ್, ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತವರ ತಂಡ ಕೂಡ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಭದ್ರಾವತಿ ಮೂಲದ ಶರತ್ ಜುಲೈ 23ರಂದು ಕೊಲ್ಲೂರಿಗೆ ಬಂದಿದ್ದ ಶರತ್ ಇಲ್ಲಿನ ಅರಶಿನಗುಂಡಿ ಜಲಪಾತದಲ್ಲಿ ಬಂಡೆ ಕಲ್ಲಿನ ಮೇಲೆ ನಿಂತ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಶರತ್ ಕಾಲು ಜಾರಿ ಬೀಳುವ ವಿಡಿಯೋ ಸ್ನೇಹಿತನ ಮೊಬೈಲ್‌‌ನಲ್ಲಿ ಸೆರೆಯಾಗಿತ್ತು.

 
 
 
 
 
 
 
 
 
 
 

Leave a Reply