ಕಾರ್ಕಳ : ಕಾರ್ಕಳದ ಯೂತ್ ಫಾರ್ ಸೇವಾ ತಂಡವು ಮಕ್ಕಳಿಗಾಗಿ ಪರಿಸರ ಸ್ನೇಹಿ ಗಣಪತಿ ರಚನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ವೀಣಾ ಶಾನುಭೋಗ್ ರ ಅಜ್ಜಿ ಮನೆಯಲ್ಲಿ ಕಾರ್ಯಕ್ರಮ ನಡೆಯಿತು.ಡೇ ಕೇರ್ ನ 15 ಮಕ್ಕಳು, ಆನ್ ಲೈನ್ ನಲ್ಲಿ 16 ಮಕ್ಕಳು ಖುಷಿ ಹಾಗೂ ಆಸಕ್ತಿಯಿಂದ ಪಾಲ್ಗೊಂಡರು. ಮುದ್ದು ಮುದ್ದು ಮಕ್ಕಳು ಗೋಧಿಹಿಟ್ಟು ಮತ್ತು ಅರಸಿನವನ್ನು ಸೇರಿಸಿ ಗಣಪತಿಯನ್ನು ಮಾಡಿ ಪರಿಸರ ಉಳಿಸಿ ಪರಿಸರ ಬೆಳಸಿ ಎಮ್ಮ ಎಂಬ ಸಂದೇಶ ಸಾರಿದರು.
ಯೂತ್ ಫಾರ್ ಸೇವ ಸಂಸ್ಥೆ ರಮಿತಾ ಶೈಲೇಂದ್ರ ರಾವ್, ಚಂದ್ರಿಕಾ, ಗಾಯತ್ರಿ, ಮಂಜುನಾಥ್ ಪೈ ಸುದೀಪ್ ಕಾಮತ್ ಉಪಸ್ಥಿತರಿದ್ದರು.