ಬ್ರಹ್ಮಾವರ: ಕಪ್ಪೆ ಚಿಪ್ಪು ಹೆಕ್ಕಲು ಹೋದ ನಾಲ್ವರು ನೀರುಪಾಲು

ಬ್ರಹ್ಮಾವರ: ಹೂಡೆ ಕುದ್ರುವಿನಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ಹೋದ ನಾಲ್ವರು ನೀರುಪಾಲದ ಘಟನೆ ಇಂದು ಸಂಜೆ ನಡೆದಿದೆ.

ರಂಜಾನ್ ಹಬ್ಬಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಶೃಂಗೇರಿಯ ಇಬ್ಬರು ಯುವಕರ ಸಹಿತ ಸ್ಥಳೀಯ ಇಬ್ಬರು ನೀರುಪಾಲಗಿದ್ದಾರೆ.

ಹೂಡೆ ಸಮೀಪದ ಕುಕ್ಕುಡೆ ಕುದ್ರು ಒಂದಕ್ಕೆ ಕಪ್ಪೆಚಿಪ್ಪು ಹಿಡಿಯಲು ಏಳು ಮಂದಿ ದೋಣಿಯಲ್ಲಿ ಹೋಗಿದ್ದರು. ಆ ಸಂದರ್ಭ ಓರ್ವ ದೋಣಿಯಲ್ಲಿ ಆಯ ತಪ್ಪಿ ಬಿದ್ದಿದ್ದ ಆತನನ್ನು ರಕ್ಷಿಸಿಲು ಮೂವರು ನೀರಿಗೆ ಹಾರಿದ್ದರೆ.

ನೀರಿ ಭರತ ಹೆಚ್ಚಾಗುತ್ತಿದ್ದಂತೆ ನಾಲ್ವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಉಳಿದ ಮೂವರು ತಮ್ಮನ್ನು ರಕ್ಷಿಸಿಕೊಂಡು ದಡ ಸೇರಿದ್ದಾರೆ.

ನೀರುಪಾಲಾದವರನ್ನು ಹೂಡೆಯ ಫೈಝಾನ್ ಹಾಗೂ ಇಬಾದ್, ಸುಫಾನ್ ಮತ್ತು ಫರಾನ್ ಎಂದು ಪೊಲೀಸರು ತಿಳಿಸಿದ್ದಾರೆ. ನೀರುಪಾಲದ ಮೂವರ ಮೃತ ದೇಹವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ.

ನೀರುಪಾಲದ ಓರ್ವನ ಪತ್ತೆ ಕಾರ್ಯ ಮುಂದುವರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply