ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ ನಿಧನ

ಅಂಬಲಪಾಡಿ ಬಲ್ಲಾಳ ಮನೆತನದ ಹಿರಿಯರಲ್ಲಿ ಓರ್ವರಾದ, ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ (74 ವರ್ಷ) ಅನಾರೋಗ್ಯದಿಂದ ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ .

ಉಡುಪಿಯ ಭಂಡಾರಕೇರಿ ಮಠದ ಆವರಣದಲ್ಲಿ ಶ್ರೀ ಮಾರುತಿ ಜ್ಯೋತಿಷ್ಯಾಲಯವನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಅವರು ಪಂಚಾಂಗ ಕರ್ತೃಗಳಲ್ಲಿ ಒಬ್ಬರಾಗಿದ್ದರು ‌. ಅಸಂಖ್ಯ ಜನರಿಗೆ ಜ್ಯೋತಿಷ್ಯ ಪ್ರಶ್ನೆಯ ಮೂಲಕ ಸಾಂತ್ವನ ನೀಡುತ್ತಿದ್ದರು. ಬಲ್ಲಾಳರ ನಿಧನಕ್ಕೆ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಅಂಬಲಪಾಡಿ ಬ್ರಾಹ್ಮಣ ಸಮಿತಿ, ಶಾಸಕ ಕೆ ರಘುಪತಿ ಭಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply