ಈದ್ ಹಬ್ಬದ ನಡುವೆಯೂ ಆಂಬ್ಯುಲೆನ್ಸ್ ಮೂಲಕ ಶವ ಸಾಗಾಟ ಕರ್ತವ್ಯ

ಉಡುಪಿ: ಗಂಗೊಳ್ಳಿ 24×7 ಆಂಬ್ಯುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ ನೇತೃತ್ವದಲ್ಲಿ ರಜ್ಜಬ್ ಬುಡ್ಡ, ನದೀಮ್, ವಿಲ್ಸನ್, ಸುಭಾನ್ ಕಳೆದ ಕೆಲವು ದಿನಗಳಿಂದ ಕೋವಿಡ್ 19 ಶವ ಸಾಗಾಟ ಹಾಗೂ ಅಂತ್ಯಕ್ರಿಯೆ ಕಾರ್ಯ ನಡೆಸುತ್ತಿದ್ದಾರೆ.

ಗುರುವಾರ ಈದ್ ಉಲ್ ಫಿತರ್ ಹಬ್ಬದ ದಿನದಂದೂ ಸಹ ಶವ ಸಾಗಾಟದ ಕರೆಗೆ ಸ್ಪಂದಿಸಿದ ಆಂಬ್ಯುಲೆನ್ಸ್ ಚಾಲಕ ರಜ್ಜಬ್ ಬುಡ್ಡ ಹಾಗೂ ನಿರ್ವಾಹಕ ಸುಭಾನ್ ಇವರು ಆಂಬ್ಯುಲೆನ್ಸ್ ಮೂಲಕ ಶವವನ್ನು ಮಣಿಪಾಲ ಆಸ್ಪತ್ರೆಯ ಶವಾಗಾರದಿಂದ ಕುಂದಾಪುರ ರುದ್ರಭೂಮಿಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

 

 

 

 

 

 
 
 
 
 
 
 
 
 
 
 

Leave a Reply