ಶೀರೂರು ಮಠದ ನೂತನ ಯತಿ​ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀ ಪಾದರು ​

ಉಡುಪಿ: ಅಷ್ಟಮಠಗಳಲ್ಲೊಂದಾದ ಶೀರೂರು ಮಠದ 31ನೇ ಯತಿಯಾಗಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶುಕ್ರವಾರ ನಿಯುಕ್ತಿಗೊಂಡರು.​ 
ಅಕ್ಷಯ ತೃತಿಯಾ ಶುಭ​ ​ದಿನದಂದು ದ್ವಂದ್ವ ಮಠಾಧೀಶ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮೂಲ ಮಠದಲ್ಲಿ ನೂತನ ಯತಿಗೆ ಶೀರೂರು ಮಠದ ಉತ್ತರಾಧಿಕಾರಿ ಯಾಗಿ ಪಟ್ಟಾಭಿಷೇಕ ​ನೆರವೇರಿಸಿ ಶ್ರೀ ಶ್ರೀ ವೇದವರ್ಧನ ತೀರ್ಥ​ ಎಂದು ​ನಾಮಕರಣ ​ಮಾಡಿದರು 

ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆದವು.​ ಇಂದು ಮಧ್ಯಾಹ್ನ 12.35ರ ಸುಮುಹೂರ್ತದಲ್ಲಿ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶಿರದಲ್ಲಿ ಶೀರೂರು ಮಠದ ​ ​ಉಪಾಸ್ಯಮೂರ್ತಿ ಶ್ರೀ ವಿಠಲ​ ದೇವರು ​ಸಹಿತ ಸಾಲಿಗ್ರಾಮವನ್ನಿರಿಸಿಕೊಂಡಿದ್ದ ನೂತನ ಯತಿಗೆ ಪಟ್ಟಾಭಿಷೇಕ ಅಂಗ ವಾಗಿ ಅಭಿಷೇಕ ನಡೆಸಿದರು.​ ​
 
 
 
 
 
 
 
 
 
 
 

Leave a Reply