ಬ್ರಹ್ಮಾವರದಲ್ಲಿ ಭೀಕರ ಬೈಕ್ ಅಪಘಾತದಿಂದ ನವವಿವಾಹಿತ ಸಾವು

ಬ್ರಹ್ಮಾವರ: ಮಂದಾರ್ತಿಯ ಕಲ್ ರಾಶಿ ಎನ್ನುವಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ನಡೂರು ನಿವಾಸಿ ಹರೀಶ್ ಪೂಜಾರಿ (36) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. 

ಚಾಂತಾರಿನಲ್ಲಿರುವ ಹೆಂಡತಿ ಮನೆಯಿಂದ ಹರೀಶ್,ಬೈಕ್ ನಲ್ಲಿ ನಡೂರಿನ ತನ್ನ ಮನೆ ಕಡಗೆ ಬರುತ್ತಿರುವಾಗ ಅಪರಿಚಿತ ವಾಹನ ಢಿಕ್ಕಿಹೊಡೆದು ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತ ಪಟ್ಟಿದ್ದಾರೆ. ತನಿಖೆಗಿಳಿದ ಬ್ರಹ್ಮಾವರ ಪೊಲೀಸರು ಅಪಘಾತ ಎಸಗಿದ ಪಿಕ್ ಆಫ್ ವಾಹನವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.ಮೃತ ಹರೀಶಗೆ ಫೆಬ್ರವರಿಯಲ್ಲಿ ವಿವಾಹವಾಗಿತ್ತು.

 
 
 
 
 
 
 
 
 
 
 

Leave a Reply