ಕಾರು-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸಹ ಸವಾರೆ ಸಾವನ್ನಪ್ಪಿರುವ ಘಟನೆ ಮುಲ್ಕಿಯಲ್ಲಿ ನಡೆದಿದೆ. ಬಾಕ್ರೆಬೈಲಿನ ಪ್ರೀತಿಕಾ ಶೆಟ್ಟಿ ( 21) ಮೃತ ದುರ್ದೈವಿ.
ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿಯಿಂದ ಮಂಗಳೂರಿನತ್ತ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರ್ನಾಡಿನಿಂದ ಬಂದು ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನ ಹಿಂಬದಿಯಲ್ಲಿದ್ದ ಯುವತಿ ಸಾವನಪ್ಪಿದ್ದಾರೆ.
ಬಾಳೆಪುಣಿಯ ನಿವಾಸಿ ಮನ್ವಿತ್ರಾಜ್ ಶೆಟ್ಟಿ ಹಾಗೂ ಬಾಕ್ರೆಬೈಲಿನ ಪ್ರೀತಿಕಾ ಶೆಟ್ಟಿ ( 21) ಅವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದು. ಇನ್ನು ಕಾರು ಢಿಕ್ಕಿ ಹೊಡೆದ ತಕ್ಷಣ ಪ್ರೀತಿಕಾ ಅವರು ಒಂದಷ್ಟು ದೂರಕ್ಕೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದರು.. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.ಸುರತ್ಕಲ್ ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.