ಇದರಿಂದ ಬಹಳಷ್ಟು ಜೀವಗಳನ್ನು ಉಳಿಸಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚಿನ ಜನ ಅಂಗಾಂಗ ದಾನಕ್ಕೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ನಾನೂ ಕೂಡ ಅಂಗಾಂಗ ದಾನಕ್ಕೆ ಸ್ವತಃ ಸಹಿ ಹಾಕುವುದರೊಂದಿಗೆ ಎಲ್ಲರಿಗೂ ಕೂಡ ಕರೆ ನೀಡುತ್ತಿ ದ್ದೇನೆ. ಈ ಮೂಲಕ ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಂದು ಜೀವ ಉಳಿಸಲು ಸಹಕಾರಿಯಾಗೋಣ ಎಂದರು.
ಶಾಲೆ ಆರಂಭದ ಚಿಂತನೆಯ ನಡುವೆ ಮಕ್ಕಳಿಗೆ ಹೆಚ್ಚು ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿ ರುವುದರ ಹಿನ್ನಲೆಯಲ್ಲಿ ಬೆಂಗಳೂರಿಗೆ ಹೋದ ತಕ್ಷಣ ತಜ್ಞರ ಸಮಿತಿಯ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದರು.