ನಾಯಕತ್ವ ಹಾಗೂ ಸಂವಹನ ಕೌಶಲ್ಯದ ಬಗ್ಗೆ ಕಾರ್ಯಗಾರ

ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಅಜ್ಜರಕಾಡಿನ ಆಂತರಿಕಗುಣಮಟ್ಟ ಭರವಸೆ ಕೋಶ ಹಾಗೂ ಸ್ನಾತಕೋತ್ತರ ವಿಭಾಗದ ವತಿಯಿಂದ ನಾಯಕತ್ವ ಹಾಗೂ ಸಂವಹನ ಕೌಶಲ್ಯದ ಕುರಿತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರಿಗೆ ತರಬೇತಿಯು ಕಾಲೇಜಿನ ಸ್ನಾತಕೋತ್ತರ ವಿಭಾಗದ ಎ.ವಿ. ಹಾಲ್ ನಲ್ಲಿ ಇತ್ತಿಚೇಗೆ ನಡೆಸಲಾಯಿತು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಜಿ. ಸಿ. ಐ ಯ ರಾಷ್ಟ್ರೀಯ ಮಟ್ಟದ ತರಬೇತಿದಾರರಾದ ಶ್ರೀ ಸದಾನಂದ ನಾವಡ ಅವರು ಆಗಮಿಸಿ ವಿದಾರ್ಥಿಗಳಿಗೆ ತರಬೇತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಭಾಸ್ಕರ್ ಶೆಟ್ಟಿ ಎಸ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ  ಸ್ನಾತಕೋತ್ತರ ವಿಭಾಗದ ನಿರ್ದೇಶಕರಾದ  ಪ್ರೊ. ಶ್ರೀಧರ್ ಪ್ರಸಾದ್  ಕೆ ಅವರು ಸ್ವಾಗತಿಸಿದರು.  ಕು. ವೈಷ್ಣವಿ ಪ್ರಾರ್ಥಿಸಿದ ಈ ಕಾರ್ಯಕ್ರಮವನ್ನು ದ್ವಿತೀಯ ಎಂ.ಕಾಮ್ ವಿದ್ಯಾರ್ಥಿನಿ ಪ್ರಜ್ಞಾ ಶೆಟ್ಟಿ ನಿರೂಪಿಸಿದರು. ಡಾ.ಅಬ್ದುಲ್ ರಝಾಕ್,  ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply