ಕಾರ್ಮೆಲ್ ಶಾಲೆ: ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು, ಇಲ್ಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ದಿನಾಂಕ 27.07.2022ರ ಬುಧವಾರ ಬೆಳಗ್ಗೆ 9:30ಕ್ಕೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಲೆಸ್ಲಿ ಆರೋಜಾ ಕುಟುಂಬ ಆಯೋಗ ಉಡುಪಿ ಧರ್ಮ ಪ್ರಾಂತ್ಯದ ಆಪ್ತ ಸಮಾಲೋಚಕರು, ಶಾಲಾ ಜಂಟಿ ಕಾರ್ಯದರ್ಶಿಯಾದ ಸಿಸ್ಟರ್ ನಿವೇದಿತಾ ಎ.ಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾನ್ ಎ.ಸಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಘವೇಂದ್ರ ಕಿಣಿ, ಶಿಕ್ಷಕ- ರಕ್ಷಕ ಸಂಘದ ಕಾರ್ಯದರ್ಶಿ ಶಿಕ್ಷಕಿ ಶ್ರೀಮತಿ ದಿವ್ಯ ಕುಮಾರಿ, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ಶ್ರೀಯುತ ಲೆಸ್ಲಿ ಆರೋಜಾ ಪೋಷಕರನ್ನುದ್ದೇಶಿಸಿ ಮಾತನಾಡಿ ” ಮಕ್ಕಳ ಯಾವ ಯಾವ ಹಂತಗಳಲ್ಲಿ ಯಾವ ಯಾವ ಮೌಲ್ಯಗಳು ಹೆಚ್ಚು ಕೇಂದ್ರೀಕರಣ ಮತ್ತು ಸ್ಥಿರಗೊಳ್ಳಬೇಕಿದೆ ಇದಕ್ಕಾಗಿ ತಕ್ಕ ಭೂಮಿಕೆ ನಿರ್ಮಾಣವು ಮನೆಯಲ್ಲಿ ಮತ್ತು ಶಾಲೆಯಲ್ಲಿ ಹೇಗೆ ದೊರಕಬೇಕು” ಎಂಬ ವಿಚಾರಗಳ ಬಗ್ಗೆ ಸ್ಥೂಲವಾಗಿ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಸಂಸ್ಥೆಯ ನೀತಿ- ನಿಯಮಗಳನ್ನು ತಿಳಿಸಿದರು. ಶಿಕ್ಷಕಿ ಸೆಲೀನ್ ಕ್ರಾಸ್ತಾ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಮತ್ತು ಶ್ರೀಮತಿ ಅಶ್ವಿನಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕಿ ನಿಶಾ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 
 
 
 
 
 
 
 
 
 
 

Leave a Reply