ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ವಾರ್ಷಿಕೋತ್ಸವ ಹಾಗೂ ಗೋಗ್ರಾಸ ನಿಧಿ ಸಮರ್ಪಣೆ 

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ವಾರ್ಷಿಕೋತ್ಸವವು ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನದ ಶ್ರೀನಿವಾಸ ಸಭಾ ಭವನದಲ್ಲಿ ನಡೆಯಿತು .ಬೆಳಿಗ್ಗೆ 10 ಗಂಟೆಗೆ ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ , ಮಹಾಸಭೆ , ಮಧ್ಯಾಹ್ನ ಬ್ರಾಹ್ಮಣ ಸುಹಾಸಿನಿ ಆರಾಧನೆ , ಮೆಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ , ರಂಗೋಲಿ ಸ್ಪರ್ಧೆ , ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ , ಗಂಟೆ 3.30 ರಿಂದ ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು . ಮಹಾಸಭೆಯಲ್ಲಿ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರನ್ನು 3ನೇ ಅವಧಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು .ಜೊತೆ ಕಾರ್ಯದರ್ಶಿಯಾಗಿ ಕವಿತಾ ಲಕ್ಷ್ಮೀನಾರಾಯಣ ಮತ್ತು ಜೊತೆ ಕೋಶಾಧಿಕಾರಿಯಾಗಿ ರಾಜಶೇಖರ್ ಭಟ್ ಕರಂಬಳ್ಳಿ ಅವರನ್ನು ನೇಮಿಸಲಾಯಿತು .

ಸಂಜೆ 6.30 ರಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರಿ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರರಾದ ಧಾರ್ಮಿಕ ಮುಖಂಡ ಬಾಲಾಜಿ ರಾಘವೇಂದ್ರ ಆಚಾರ್ಯ ,ಯುವ ವಿಜ್ಞಾನಿ ರಮೇಶ್ ಹೊಳ್ಳ , ಪಾಕ ತಜ್ಞ ಪ್ರಸನ್ನ ಪಾಂಗಣ್ಣಾಯ ಹಾಗೂ ಕೃಷ್ಣ ಮಠದ ಭಜನಾ ಮೇಲ್ವಿಚಾರಕಿ ಕಮಲಾವತಿ ವಾಸುದೇವ ಇವರುಗಳನ್ನು ಸನ್ಮಾನಿಸಿ ತಮ್ಮ ಅನುಗ್ರಹ ಭಾಷಣದಲ್ಲಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸಾಮಾಜಿಕ ,ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ್ತ ಪಡಿಸಿದರು .

ಶ್ರೀಗಳವರ 60 ರ ಶುಭಾವಸರದಲ್ಲಿ ಶ್ರೀಪಾದಂಗಳವರಿಗೆ ವಿಶೇಷವಾಗಿ ಸಮಿತಿಯಿಂದ ಅಭಿವಂದನೆ ಸಲ್ಲಿಸಿ ರೂಪಾಯಿ ಒಂದು ಲಕ್ಷದ ಚೆಕ್ಕನ್ನು “ಗೋಗ್ರಾಸ ” ನಿಧಿಗೆ ಸಮರ್ಪಿಸಲಾಯಿತು . 

ಇದೇ ಸಂದರ್ಭದಲ್ಲಿ ಅರೋಗ್ಯ ನಿಧಿ ವಿತರಣೆ ,ವಿದ್ಯಾನಿಧಿ ಅರ್ಪಣೆ ಹಾಗೂ ವಿಪ್ರ ಗೋಪಾಲಕರಿಗೆ ಸಮ್ಮಾನ ಮಾಡಲಾಯಿತು .

ಸಭೆಯ ಅಧ್ಯಕ್ಷತೆಯನ್ನು ನಿಕಟ ಪೂರ್ವ ಶಾಸಕ ರಘುಪತಿ ಭಟ್ ವಹಿಸಿ ಗಣ್ಯರನ್ನು ಸ್ವಾಗತಿಸಿದರು .ಮುಖ್ಯ ಅಥಿತಿಗಳಾಗಿ ಆಗಮಿಸಿದ ಧಾರ್ಮಿಕ ಮುಖಂಡ ವಿದ್ವಾನ್ ಹೆರ್ಗ ರವೀಂದ್ರ ಭಟ್ ಶುಭಾಶಂಸನೆ ಗೈದರು .ಪರ್ಕಳ ಮಂಜುನಾಥ್ ಉಪಾಧ್ಯ , ಸಂದೀಪ್ ಮಂಜ , ಅರ್ಚಕ ದಿವಾಕರ್ ಐತಾಳ್ ಕಾರ್ಯದರ್ಶಿ ನಾಗರಾಜ್ ಭಟ್ ,ಕೋಶಾಧಿಕಾರಿ ಅಜಿತ್ ಬಿಜಾಪುರ್ ಉಪಸ್ಥಿತರಿದ್ದರು .

ರಂಗನಾಥ್ ಸಾಮಗ , ಲಕ್ಮಿನಾರಾಯಣ ಆಚಾರ್ಯ ,ಚಂದ್ರಕಾಂತ್ ಕೆ ಎನ್ , ಶ್ರೀಪತಿ ಭಟ್ , ಕುಮಾರಸ್ವಾಮಿ ಉಡುಪ , ರಂಗನಾಥ ಸರಳಾಯ , ಸುಧಾ ಭಟ್ , ಕವಿತಾ ಆಚಾರ್ , ವಸುಧಾ ಭಟ್ , ರಾಧಿಕಾ ಚಂದ್ರಕಾಂತ್ ಸಹಕರಿಸಿದರು .

ಅಧ್ಯಕ್ಷ ಶ್ರೀಕೃಷ್ಣರಾಜ್ ಭಟ್ ಧನ್ಯವಾದ ಸಮರ್ಪಿಸಿದರು .

ಪೆರಂಪಳ್ಳಿ ವಾಸುದೇವ ಭಟ್ ಮತ್ತು ಶ್ರೀನಿವಾಸ ಬಲ್ಲಾಳ್ ನಿರೂಪಿಸಿದರು .

 
 
 
 
 
 
 
 
 
 
 

Leave a Reply